ದೇವಸ್ಥಾನದ ಅರ್ಚಕರು ದೈವಸ್ಥಾನ ಚಾಕರಿ ವರ್ಗದವರಿಗೆ ಆಹಾರ ಕಿಟ್ ವಿತರಣೆ
ಫರಂಗಿಪೇಟೆ : ದೇವಸ್ಥಾನ ದ ಅರ್ಚಕ ವರ್ಗ ಹಾಗು ದೈವಸ್ಥಾನ ದ ಚಾಕರಿ ವರ್ಗದವರಿಗೆ ಇಸ್ಕೊನ್ ಅಕ್ಷಯ ಪಾತ್ರೆ ಫೌಂಡೇಶನ್ ರವರು ಮಾಡಿದ ಜೀವನಾವಶ್ಯ ಆಹಾರ ವಸ್ತುಗಳ ಕಿಟ್ ಗಳನ್ನು ದ ಕ ಜಿಲ್ಲಾ ಉಸ್ತುವಾರಿ ,ಧಾರ್ಮಿಕ ದತ್ತಿ ಸಚಿವರಾದ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರು ವಿತರಿಸಿದರು.
ಈ ಸಂದರ್ಭ ದಲ್ಲಿ ಅಕ್ಷಯ ಪಾತ್ರೆ ಫೌಂಡೇಶನ್ ನ ಕಾರುಣ್ಯಾದಾಸ್ ಸ್ವಾಮೀಜಿ , ರಾಧಾದಾಸ್ ಸ್ವಾಮೀಜಿ , ಬಿ ಜೆ ಪಿ ಜಿಲ್ಲಾ ಅಧ್ಯಕ್ಷರಾದ ಸುದರ್ಶನ್ ಮೂಡಬಿದ್ರೆ , ಜಿಲ್ಲಾ ಬಿ ಜೆ ಪಿ ಕಾರ್ಯದರ್ಶಿ ಸತೀಶ್ ಕುಂಪಲ , ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ , ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ , ತುಂಬೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಹೇಮಲತಾ ಪೂಜಾರಿ ,ಎ ಪಿ ಎಂ ಸಿ ಸದಸ್ಯ ವಿಠ್ಠಲ್ ಸಾಲ್ಯಾನ್ , ಬಿ ಜೆ ಪಿ ಮುಖಂಡರುಗಳಾದ ಹೇಮಂತ್ ಶೆಟ್ಟಿ , ಸೋಮಪ್ಪ ಕೋಟ್ಯಾನ್ ,ಯಶವಂತ ಅಮೀನ್ , ಚಂದ್ರಹಾಸ್ ಅಡ್ಯಂತಾಯ , ಮೋಹನ್ ರಾಜ್ ಕೆ ಆರ್ , ಸಚಿನ್ ಮೊರೆ , ಮನೋಜ್ ಆಚಾರ್ಯ , ದಿನೇಶ್ ಶೆಟ್ಟಿ ಕೊಟ್ಟಿಂಜ , ಪ್ರವೀಣ್ ಶೆಟ್ಟಿ ಸುಜೀರ್ ಜಯಶ್ರೀ ಕರ್ಕೇರ , ಮನೋಹರ್ ಪೆರ್ಲಕ್ಕೆ , ವಿಜಯ ಕಜೆಕಂಡ , ಮತ್ತಿತರರು ಉಪಸ್ಥಿತರಿದ್ದರು.