ನವದೆಹಲಿ : ಪಡಿತರ ಕಾರ್ಡ್ ದಾರರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಪಡಿತರ ಕೇಂದ್ರಗಳಲ್ಲಿ ಮೊಟ್ಟೆ, ಮೀನು, ಚಿಕನ್ ಮತ್ತು ಮಾಂಸವನ್ನು ನೀಡುವ ಯೋಜನೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಅಪೌಷ್ಠಿಕತೆ ನಿವಾರಿಸಲು ಪ್ರೋಟಿನ್ ಯುಕ್ತ ಆಹಾರ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, 2020 ರ ಏಪ್ರಿಲ್ 1 ರಂದು ಪಡಿತರ ಕಾರ್ಡ್ ದಾರರಿಗೆ ಮೀನು, ಮೊಟ್ಟೆ, ಚಿಕನ್ ಮತ್ತು ಮಾಂಸವನ್ನು ಪಡಿತರ ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ನೀಡುವ ಕುರಿತಂತೆ ಹೊಸ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಸಿದೆ. ಪಡಿತರ ವ್ಯವಸ್ಥೆಯ ಅಡಿಯಲ್ಲಿ ವಿತರಿಸಲಾಗುತ್ತಿರುವ ಗೋಧಿ, ಅಕ್ಕಿ, ಧಾನ್ಯಗಳ ಜೊತೆಗೆ ಇನ್ನಷ್ಟು ಆಹಾರ ಪದಾರ್ಥ ಸೇರಿಸಲು ನೀತಿ ಆಯೋಗ ಉದ್ದೇಶಿಸಿದೆ ಎನ್ನಲಾಗಿದೆ.

