ಕೈಕಂಬ:ಗುರುಪುರ-ಕೈಕಂಬ ಇಲ್ಲಿನ ಗಂಜಿಮಠದ ಬಡಗುಳಿಪಾಡಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಕೆಂಪು ಕಲ್ಲು ತುಂಡರಿಸುವ ಯಂತ್ರದ ಮಾಕ್ಸನ್ ಟಿಲ್ಲರ್ಸ್ ಮತ್ತು ಟ್ರ್ಯಾಕ್ಟರ್ಸ್ ನ ನೂತನ ಶಾಖೆಯ ಉದ್ಘಾಟನೆಯು ಶನಿವಾರ ನೆರವೇರಿತು.
ಅತೀ ವೇಗದಲ್ಲಿ ಕೆಂಪು ಕಲ್ಲು ತುಂಡರಿಸುವ ಮತ್ತು ಕಲ್ಲು ಎಬ್ಬಿಸುವ 2 ಇನ್ 1 ರೂಪದ ಹೊಸ ಮಾದರಿ ತಂತ್ರ, ಇವುಗಳ ನೈಜ್ಯ ಬಿಡಿ ಭಾಗಗಳು ಹಾಗೂ 12ಎಚ್ಪಿ, 15 ಎಚ್ಪಿ, 18ಎಚ್ಪಿ, ಡಿಐ ಬೋಲ್ ಬೇರಿಂಗ್ ಇಂಜಿನ್ಗಳು ಇಲ್ಲಿ ಲಭ್ಯವಿದೆ ಎಂದು ಮಾಕ್ಸನ್ ಟಿಲ್ಲರ್ಸ್-ಟ್ರ್ಯಾಕ್ಟರ್ಸ್ ಕರ್ನಾಟಕ ಇದರ ಮ್ಯಾನೆಜರ್ ವಿಜಯನ್ ಹೇಳಿದರು.
ನೂತನ ಶಾಖೆಯ ಉದ್ಘಾಟನೆಯನ್ನು ಮಾರ್ಕೆಟಿಂಗ್ ಮ್ಯಾನೆಜರ್ ರಮಾವರನ್ ನೆರವೇರಿಸಿದರು. ಈಸಂದರ್ಭದಲ್ಲಿ ಶರತ್ ಪೊಳಲಿ, ರತೀಶ್,ಪವನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.



