ವಿಶ್ವದಲ್ಲಿ ಜನರು ಶ್ರೀಮಂತರಾಗಲು ಏನೆಲ್ಲ ಮಾಡುತ್ತಾರೆ ? ಆದರೆ ಕೆಲವರಂತು ಅತಿ ಬೇಗನೆ ಶ್ರೀಮಂತರಾಗಲು ಅಡ್ಡದಾರಿ ಕೂಡ ಹಿಡಿಯುತ್ತಾರೆ. ಶೀಘ್ರದಲ್ಲಿ ಶ್ರೀಮಂತರಾಗಲು
ತೀರಾ ಕೀಳು ಮಟ್ಟಕ್ಕೂ ಕೂಡ ಇಳಿಯುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಶ್ರೀಮಂತನಾಗಲು ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದಾನೆ .
ಜೂಲೂ ಎನ್ನುವ ವ್ಯಕ್ತಿ ತಾನು ಶ್ರೀಮಂತನಾಗಲು ಸಾಕಷ್ಟು ತರಹದ ಪ್ರಯತ್ನ ಮಾಡಿದ್ದಾನೆ. ಶ್ರೀಮಂತನಾಗುವ ಆಸೆಯುಳ್ಳ ಈ ವ್ಯಕ್ತಿ ತನ್ನ ಇಂಗಿತವನ್ನು ತನ್ನ ಗೆಳೆಯರ ಬಳಿ ತನ್ನ ಆಸೆಯನ್ನು ತಿಳಿಸಿದ್ದ. ಒಬ್ಬ ಬಾಬಾ ಇದ್ದಾರೆ ಅವರನ್ನು ಭೇಟಿಯಾದರೆ ನೀನು ಶ್ರೀಮಂತನಾಗುತ್ತೀಯಾ ಎಂದು ಗೆಳೆಯರು ಪುಕ್ಕಟೆ ಸಲಹೆ ನೀಡಿದ್ದಾರೆ.

ಈ ವ್ಯಕ್ತಿ ಬೇಗನೆ ಶ್ರೀಮಂತನಾಗಲು ಬಾಬಾರ ಹತ್ತಿರ ಹೋದಾಗ ಆ ಬಾಬಾ ನೀಡಿದ ಸಲಹೇ ಏನು ಗೊತ್ತೇ? ನೀನು ಮರ್ಮಾಂಗವನ್ನು ಕತ್ತರಿಸಿಕೋಂಡರೆ ಬೇಗನೆ ಶ್ರೀಮಂತನಾಗುತ್ತಿಯಾ ಎಂಬ ಸಲಹೆ ನೀಡಿದ್ದ. ಅತಿ ಬೇಗ ಶ್ರೀಮಂತನಾಗಬೇಕೆಂದು ಜೂಲೂ ಬಾಬಾರ ಸಲಹೆಯ ಮೇರೆಗೆ ಚಪಿತಾ ಹೆಸರಿನ ಕಾಡಿನಲ್ಲಿ ಹೋಗಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೋಂಡ. ಆದರೆ ಮರ್ಮಾಂಗವನ್ನು ಕತ್ತರಿಸಿಕೊಳ್ಳುವುದು ಸುಲಭವೇ ? ಆ ಮೇಲೆ ಇತನಿಗೆ ಸಾಕಷ್ಟು ನೋವಾಯಿತು. ನೋವಿನಿಂದ ತಾನು ಮುರ್ಖನಾಗಿದ್ದೇನೆ ಎಂಬ ಅರಿವು ಈತನಿಗಾಯಿತು ಆಗ ನೋವು ತಾಳಲಾರದೆ ಜೋರಾಗಿ ಕೂಗ ತೋಡಗಿದ. ಆಗ ಸ್ಥಳದಲ್ಲಿದ್ದ ಜನರು ಆತನನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಜುಲೂ ಜೀವವಂತೂ ಉಳಿಯಿತು ಆದರೆ ಆತ ಮಾರ್ಮಾಂಗ ಕಳೆದುಕೊಂಡ ಜೊತೆಗೆ ಶ್ರೀಮಂತಿಕೆ ಕೂಡಾ ಬರಲಿಲ್ಲ.
