ಬಂಟ್ವಾಳ: ಶಂಭೂರು ಗ್ರಾಮದ ಇರಂತಬೆಟ್ಟು ಶ್ರೀ ಅಸು ವೈದ್ಯನಾಥ ಧೂಮಾವತಿ ಬಂಟ ದೈವಗಳ ದೈವಸ್ಥಾನದಲ್ಲಿ ದಿನಾಂಕ ಫೆಬ್ರವರಿ 8ರಿಂದ ಫೆಬ್ರವರಿ 10ರ ವರೆಗೆ ಶ್ರೀ ಅಸು ವೈದ್ಯನಾಥ ಧೂಮಾವತಿ ಬಂಟ ದೈವಗಳಿಗೆ ಪುದ್ದರ್ ಮೆಚ್ಚಿ ವಾರ್ಷಿಕ ಜಾತ್ರೆ ಜರಗಲಿದ್ದು ದಿನಾಂಕ ಫೆಬ್ರವರಿ 01 2018ರಂದು ಗುರುವಾರ ಗೊನೆ ಮುಹೂರ್ತ ಗ್ರಾಮದ ಗುರಿಕಾರರ ಸಮ್ಮುಖದಲ್ಲಿ ನಡೆದಿದೆ.
ಫೆಬ್ರವರಿ 9 2018ರಂದು ಶ್ರೀ ವೈದ್ಯನಾಥ ದೈವಕ್ಕೆ ಕಂಚೀಲು ಸೇವೆಯೂ ನಡೆಯಲಿರುವುದು. ಆದ್ದರಿಂದ ಭಕ್ತಾಧಿಗಳು ಈ ಪುಣ್ಯ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟನೆ ತಿಳಿಸಿದೆ
