ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಕಲ್ಕುರಿಪದವು ಎಂಬಲ್ಲಿ ಅಯ್ಯಪ್ಪ ಭಕ್ತ ವೃಂದ ಇದರ ವತಿಯಿಂದ ಸೋಮವಾರ ನಡೆದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಕಾರ್ಯಕ್ರಮದಲ್ಲಿ ಹನುಮಗಿರಿ ಮೇಳದ ಯುವ ಭಾಗವತ, ಗಾನಸುರಭಿ ರವಿಚಂದ್ರ ಕನ್ನಡಿಕಟ್ಟೆ ಇವರನ್ನು ಸನ್ಮಾನಿಸಲಾಯಿತು. ಜಯ ಗುರುಸ್ವಾಮಿ, ರಮೇಶ ಕಲ್ಕುರಿ ಮತ್ತಿತರರು ಇದ್ದರು.
