ಬಂಟ್ವಾಳ: ಸರಕಾರದ ವಸತಿ ಯೋಜನೆಗಳ ಫಲಾನುಭವಿಗಳಿಗೆ , ತಾ.ಪಂ.ಸದ್ಯರು ಗ್ರಾ.ಪಂ.ಸದಸ್ಯರು ಮತ್ತು ಪಿಡಿಒಗಳಿಗೆ ಅಧಾಲತ್ ಕಾರ್ಯಕ್ರಮ ತಾ.ಪಂ.ನ ಎಸ್ ಜಿ.ಆರ್.ಎಸ್.ವೈ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಲೋಕೇಶ್ ಅವರು ವಸತಿ ಯೋಜನೆ ಅನುಷ್ಟಾನ ಮಾಡುವಲ್ಲಿ ಇರುವ ಸಮಸ್ಯೆಗಳ ಬಗ್ಗೆ ಫಲಾನುಭವಿಗಳಿಂದ ಮಾಹಿತಿ ಪಡೆದು ಸೂಕ್ತ ನಿರ್ದೇಶನಗಳನ್ನು ನೀಡಿದರು. ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಕಾರ್ಯಕ್ರಮದ ಅಧ್ಯಕ್ಷತೆ ವಹಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಅಬ್ಬಾಸ್ ಆಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಸಿ ಬಂಗೇರ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿಪ್ರಿಂಯಾನ್ ಮಿರಾಂದ, ತಾ.ಪಂ.ಸದ್ಯರು ಗ್ರಾ.ಪಂ.ಸದಸ್ಯರು ಮತ್ತು ಪಿಡಿಒಗಳಿಗೆ ಉಪಸ್ಥಿತರಿದ್ದರು.

