ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಳದ ಜೀಣೋದ್ಧಾರದ ಕೆಲಸಕಾರ್ಯಗಳು ಊರ ಹಾಗೂ ಪರವೂರ ಭಕ್ತರ ಕರಸೇವೆಯ ಮುಖಾಂತರ ನವೀಕೃತಗೊಂಡು ದೇವಳದ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದ್ದು ಈದೀಗ ಶ್ರೀ ದೇವರ ನೂತನ ಧ್ವಜಸ್ತಂಭವನ್ನು ಬಿಲ್ಲವ ಸಮಾಜದ ಭಕ್ತ ಬಾಂಧವರು ಸಮರ್ಪಿಸುವ ಕುರಿತು ಧ್ವಜಸ್ತಂಭವನ್ನು ಅದ್ದೂರಿಯಾಗಿ ಮೆರವಣಿಗೆಯಲ್ಲಿ ತರಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿತ್ತು . ಸಮಾಲೋಚನಾ ಸಭೆಯು ಭಾನುವಾರ ಸಂಜೆ 4 ಗಂಟೆಗೆ ಪೊಳಲಿ ಸರ್ವಮಂಗಳ ಹಾಲ್ ನಲ್ಲಿ ಜರುಗಿತು.
ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ರಾಜಶೇಖರ ಕೋಟ್ಯಾನ್, ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬತ್ತಲ್ ಇದರ ಕಾರ್ಯಾಧ್ಯಕ್ಷ ಪಿತಾಂಭರ ಹೆರಾಜೆ, ಸೇಸಪ್ಪ ಕೋಟ್ಯಾನ್ ಪಚಿನಡ್ಕ,ಧಾರ್ಮಿಕ ದತ್ತಿ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ಗಣೇಶ್ ಪೂಜಾರಿ, ಪುರುಷ ಸಾಲಿಯಾನ್, ಭುವನೇಶ್ ಪಚಿನಡ್ಕ,ಗೋಪಾಲಕೃಷ್ಣ ಕೈಕಂಬ, ಶಶಿಧರ ಇರುವೈಲ್, ಬಲ್ಲಿ ಶೇಖರಪೂಜಾರಿ,ಚಂದಪ್ಪ, ಅರ್ಕುಳ ರಾಮ್ದಾಸ್ ಮಜಿ, ದೀಪಕ್ ಕೋಟ್ಯಾನ್,ದೋಗು ಪೂಜಾರಿ, ಯಶವಂತಪೂಜಾರಿ, ಜನಾರ್ಧನ ಅಮ್ಮುಂಜೆ,ಗಂಗಾಧರ ಪೂಜಾರಿ, ಸದಾನಂದ ಕಾಜಿಲ ಹಾಗೂ ಬಿಲ್ಲವ ಮುಖಂಡರು ಉಪಸ್ಥಿತರಿದ್ದರು.






