ಕೈಕಂಬ:ಬಡಗಬೆಳ್ಳೂರು ಶಾರದೆಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಶಾರದಾ ಮಾತೆಯ ಶೋಭಾಯಾತ್ರೆಯು ಸೆ30ರಂದು ಶನಿವಾರ ದೇವಸ್ಥಾನದಿಂದ ಹೊರಟು ಕೊಳತ್ತಮಜಲು ಎಕ್ಕುಂದ ಮಾರ್ಗವಾಗಿ ಫಲ್ಗುಣಿ ನದಿಯಲ್ಲಿ ವಿಸರ್ಜಣೆಯಾಗಲಿದೆ.
* ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಶಾರದೆ
ಪೂರ್ವಾಹ್ನ 8ಕ್ಕೆ ಕಲಶ ವಿಸರ್ಜನೆ,ಚಂಡಿಕಾಹೋಮ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಶಾರದಾಪೂಜೆ, ಸಂಜೆ 6ರಿಂದ ಅನ್ನಸಂತರ್ಪಣೆ, ನಂತರ ಶ್ರೀ ವೀರಭದ್ರ ಮಹಮ್ಮಾಯಿ ಚೆಂಡೆಬಳಗ , ಹಳೆಯಂಗಡಿ ಇವರಿಂದ ” ಚೆಂಡೆ ಸಿಂಗಾರಿ ಮೇಳ” ನಂತರ ಜೈ ವೀರ ಮಾರುತಿ ವ್ಯಾಯಾಮ ಶಾಲೆ ಬಡಗಬೆಳ್ಳೂರು ಇವರಿಂದ ತಾಲೀಮು ಪ್ರದರ್ಶನ ಹಾಗೂ ವಿವಿಧ ವೇಷ ವನೋದಾವಳಿಗಳೊಂದಿಗೆ ಶಾರದಾ ಮಾತೆಯ ಶೋಭಾಯಾತ್ರೆ ದೇವಸ್ಥಾನದಿಂದ ಹೊರಟು ಕೊಳತ್ತಮಜಲು ಎಕ್ಕುಂದ ಮಾರ್ಗವಾಗಿ ಫಲ್ಗುಣಿ ನದಿಯಲ್ಲಿ ವಿಸರ್ಜಣೆ ಜರುಗಲಿದೆ.
