ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಶಿವಾಜಿ ಶಾಖೆ, ಪಾಣೆಮಂಗಳೂರು ಇದರ ಅಧ್ಯಕ್ಷರಾಗಿ ಭಾಸ್ಕರ್, ಉಪಾಧ್ಯಕ್ಷ ಅರವಿಂದ, ಸಂಚಾಲಕ ಶಂಕರ್, ಸಹಸಂಚಾಲಕ ಶೇಖರ್, ಗೋರಕ್ಷಕ ಪ್ರಮುಖ್ ಸುನೀಲ್, ಸುರಕ್ಷ ಪ್ರಮುಖ್ ಪ್ರಶಾಂತ, ಅಖಾಢ ಪ್ರಮುಖ್ ಸಂದೀಪ್, ಸತ್ಸಂಗ್ ಪ್ರಮುಖ್ ಗೌತಮ್, ವಿದ್ಯಾರ್ಥಿ ಪ್ರಮುಖ್ ಜೀವನ್, ಸಾಪ್ತಾಹೀ ಪ್ರಮುಖ್ ಬಾಲಚಂದ್ರ ಆಯ್ಕೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಪುತ್ತೂರು ಜಿಲ್ಲಾ ಸಹ-ಸಂಯೋಜಕ ಭರತ್ ಕುಮ್ಡೇಲ್, ಬಂಟ್ವಾಳ ತಾಲೂಕು ಸಂಯೋಜಕರಾಗಿರುವ ಗುರುರಾಜ್ ಬಂಟ್ವಾಳ, ಸಹ ಸಂಯೋಜಕ ಭುವಿತ್ ಶೆಟ್ಟಿ, ಸುರಕ್ಷಾ ಪ್ರಮುಖ್ ವಿವೇಕ್ರಾಜ್, ಸಾಪ್ತಾಹಿ ಪ್ರಮುಖ್ ಅಶ್ವಿತ್ ಅಜ್ಜಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು .
