ಕೈಕಂಬ: ಶ್ರೀ ಮಣಿಕಂಠ ಭಜನಾ ಮಂದಿರದಲ್ಲಿ ಸೂಯಾಸ್ತದಿಂದ ಮರುದಿನ ಸೂರ್ಯೋದಯದವರೆಗೆ ವಿವಿಧ ಭಜನಾ ಮಂಡಳಿಗಳಿಂದ ಜರಗುವ 11ನೇ ವರ್ಷದ “ಭಜನಾ ಸಂಕೀರ್ತನೆ” ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಡಿ.31ರಂದು ಶನಿವಾರ ಉದ್ಘಾಟಿಸಿ ಚಾಲನೆ ನೀಡಿದರು.







ಈ ಸಂದರ್ಭದಲ್ಲಿ ಭದ್ರಕಾಳಿ ದೇವಸ್ಥಾನದ ದೇವಿ ಪಾತ್ರಿ ರಮೇಶ್ ಬೆಂಜನಪದವು, ಕರಿಯಂಗಳ ಗ್ರಾ.ಪಂ ಅಧ್ಯಕ್ಷೆ ಚಂದ್ರಾವತಿ, ಅಮುಂಜೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮ ಲಕ್ಷ್ಮಣ್, ಬೆಳ್ಳೂರು ಆದಿಶಕ್ತಿ ದೇವಳದ ಮುಕ್ತೇಸರ ಸಂದೀಪ್, ಭಟ್ಟಾಜೆ ರಮೇಶ್ ಪೂಜಾರಿ , ಚಂದ್ರಶೇಖರ್ ಶೆಟ್ಟಿ, ಪ್ರಶಾಂತ್ ಕೊಟ್ಟಾರಿ ಪೊಳಲಿ ನಾರಾಯಣ್ ಅಂಡ್ ಸನ್ಸ್ ಮಾಲಕ ಬಾಲಕೃಷ್ಣ ಪೊಳಲಿ, ಜನಾರ್ಧನ್ ಅಮುಂಜೆ, ಪಂ. ಸದಸ್ಯರಾದ ಸುರೇಶ್ ಮಣಿಕಂಠಪುರ, ಲೋಕೇಶ್ ಭರಣ, ಕಿಶೋರ್ ಪಲ್ಲಿಪಾಡಿ, ಶಕುಂತಳಾ, ಉಪಸ್ಥಿತರಿದ್ದರು. ನಂತರ ಮಣಿಕಂಠ ಭಜನಾ ಮಂದಿರದ ಚಿಲುಮೆ ಚಿಣ್ಣರ ಬಳಗದ ವತಿಯಿಂದ ಭಜನೆ ಪ್ರಾರಂಭಗೊಂಡಿತು.







