ಮುಂಬಯಿ : ವರ್ಲಿಯ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ ಆಯೋಜಿಸಿದ ೨೩ನೇ ವಾರ್ಷಿಕ ಐಯ್ಯಪ್ಪ ಮಹಾಪೂಜೆ ಯು ಡಿ. ೨೫ ರಂದು ನಡೆಯಿತು.

_dsc0160

_dsc9618

_dsc0205

ಧಾರ್ಮಿಕ ಸಭಾಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಾಮರಾಜ ಕ್ಷತ್ರಿಯ ಸಂಘ ದ ಅಧ್ಯಕ್ಷ ರಾಜ್ ಕುಮಾರ್ ಕಾರ್ನಾಡ್, ಗೌರವ ಅತಿಥಿಯಾಗಿ ಜಿ. ಟಿ. ಆಚಾರ್ಯ ಉಪಸ್ಥಿತರಿದ್ದರು.

_dsc0195

_dsc0276

ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀನಿವಾಸ ಸಾಫಲ್ಯರು ಮಾತನಾಡುತ್ತಾ ಕಷ್ಟದ ಸಮಯದಲ್ಲಿ ಆಕಸ್ಮಿಕವಾಗಿ ನೆರವಾಗುವ ವ್ಯಕ್ತಿ ದೇವರ ಸಮಾನವಾಗುತ್ತಾನೆ ಎಂದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.

_dsc0250

_dsc0227

ರಮೇಶ್ ಗುರುಸ್ವಾಮಿಯವರು ಅಪ್ಪಾಜಿ ಬೀಡು, ಕ್ಷೇತ್ರದ ಬಗ್ಗೆ ಮಾತನಾಡಿದರು.  ಅಧ್ಯಕ್ಷ ಕೇದಗೆ ಸುರೇಶ್ ಶೆಟ್ಟಿಯವರು ಸ್ವಾಗತಿಸಿದರು. ಸಂಸ್ಥೆಯ ಪರವಾಗಿ ರಮೇಶ್ ಗುರುಸ್ವಾಮಿ, ಕೇದಗೆ ಸುರೇಶ್ ಶೆಟ್ಟಿ, ಸಂತೋಷ್ ಶೆಟ್ಟಿ, ಭೋಜ ಶೆಟ್ಟಿ, ಉದಯ ಸಾಲ್ಯಾನ್, ಅತಿಥಿಗಳನ್ನು ಗೌರವಿಸಿದರು. ಶಕುಂತಳಾ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು.

_dsc0199

_dsc0242

ಹಿರಿಯ ವಿಶ್ವಸ್ಥ ರತ್ನಾಕರ ಶೆಟ್ಟಿ, ಆಡಳಿತ ವಿಶ್ವಸ್ಥರಾದ ಶಾಂಭವಿ ಶೆಟ್ಟ ಉಪಸ್ಥಿತರಿದ್ದರು. ವಿಶ್ವಸ್ಥರಾದ ರಘುನಾಥ ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಉಪಾಧ್ಯಕ್ಷ ಕಾಂತಾಡಿ ಗುತ್ತು ಅರುಣ್ ಆಳ್ವ ವಂದನಾರ್ಪಣೆಗೈದರು.

ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್

By suddi9

Leave a Reply

Your email address will not be published. Required fields are marked *