ಪರಂಗಿಪೇಟೆ: ಪರಂಗಿಪೇಟೆ ರೈಲ್ವೆ ಜಾಗದಲ್ಲಿ ಸಣ್ಣ ಕೊಠಡಿ ಕಟ್ಟಿ 3ಕುಟುಂಬಗಳು ವಾಸವಾಗಿರುವ ಜಾಗಕ್ಕೆ ಸ್ಲಂ ಮೋರ್ಚಾ ಜಿಲ್ಲಾಧ್ಯಕ್ಷರಾದ ರಮಾ ಅಮೀನ್ ಕರೆಯ ಮೇರೆಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ತುಪ್ಪೆಕಲ್ಲು ಭೇಟಿಕೊಟ್ಟರು.
ಅಲ್ಲಿಯ ಜನರನ್ನು ಭೇಟಿಮಾಡಿ ಅಲ್ಲಿಯ ಸಮಸ್ಯೆಯನ್ನು ಕೇಳಿದರು. ಅವರು ರೆಲ್ವೆಯವರು ಹಾಕಿರುವ ಸರ್ವೆಕಲ್ಲನ್ನು ತೋರಿಸಿದರು ಮತ್ತು ರೆಲ್ವೆ ಅವರು ಬಂದು ಈ ಜಾಗವನ್ನು ಬೀಡಬೆಕು ಎಂದು ಹೇಳಿದ್ದಾರೆ.ಈ ಜಾಗಕ್ಕೆ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಇಲ್ಲ ಎಂಬ ಇತ್ಯಾದಿ ಮಾಹಿತಿಯನ್ನು ಕೊಟ್ಟರು ಇದನ್ನು ಜಿಲ್ಲಾಧ್ಯಕ್ಷರ ಗಮನಕ್ಕೆ ತಂದು ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದರು.

ಈ ಸಂದರ್ಭ ಸ್ಲಂ ಮೋರ್ಚಾ ಜಿಲ್ಲಾ ಪ್ರಧಾನ ಕಾಯದರ್ಶಿ ಸಂತೋಷ್ ತುಪ್ಪೆಕಲ್ಲು, ಹಿಂದುಳಿದ ಮೋರ್ಚಾದ ಮಂಡಲ ಕಾರ್ಯದರ್ಶಿ ಅಶೋಕ್ ಕೊಟ್ಟಾರಿ, ಪಂಚಾಯತ್ ಸದಸ್ಯರಾದ ಸುಕುಮಾರ್ ಧರ್ಮಗಿರಿ ಉಪಸ್ಥಿತರಿದ್ದರು.


