ಬಂಟ್ವಾಳ : ಕಂದಾಯ ಇಲಾಖೆಯಲ್ಲಿ 36 ವರ್ಷಗಳ ಕಾಲ ಪ್ರಥಮ ದರ್ಜೆ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮೋಹಿನಿ ಸುವರ್ಣ ಸುರತ್ಕಲ್ ಮತ್ತು ತಾಲೂಕು ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತಹಶೀಲ್ದಾರ್ ರವರ ಜೀಪು ಚಾಲಕ ವಲೇರಿಯನ್ ಡಿಸೋಜ ವಯೋ ನಿವೃತ್ತಿಗೊಂಡಿದ್ದು ಅವರ ಬೀಳ್ಕೊಡುಗೆ ಕಾರ್ಯಕ್ರಮ ಬಿ.ಸಿ.ರೋಡ್ ನ ಸ್ತ್ರೀ ಶಕ್ತಿ ಭವನದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ತಹಶೀಲ್ದಾರ್ ಪುರಂಧರ ಹೆಗಡೆ ವಹಿಸಿದ್ದರು. ಉಪತಹಶೀಲ್ದಾರ್ ಗಳಾದ ಭಾಸ್ಕರ್ ರಾವ್, ಪರಮೇಶ್ವರ ನಾಯಕ್, ಲಲಿತಾ ಶೆಟ್ಟಿ, ಮಂಗಳೂರು ಸಹಾಯಕ ಕಮಿಷನರ್ ಕಛೇರಿಯ ತಾರನಾಥ್, ಕಂದಾಯ ನಿರೀಕ್ಷಕರಾದ ದಿವಾಕರ, ರಾಮ ಕೆ., ಜನಾರ್ಧನ್ ಮತ್ತು ನವೀನ್ ಹಾಗೂ ತಾಲೂಕು ಕಛೇರಿಯ ಸಿಬ್ಬಂದಿ ವರ್ಗ ಮತ್ತು ಗ್ರಾಮ ಕರಣಿಕರು , ಗ್ರಾಮ ಸಹಾಯಕರು ಉಪಸ್ಥಿತರಿದ್ದರು

