ಕಿನ್ನಿಗೋಳಿ: ಇಂದು ಸುರಿದ ಭಾರೀ ಮಳೆಗೆ ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ, ಕಿನ್ನಿಗೋಳಿಯ ಬಟ್ಟಕೋಡಿಯಿಂದ ಶಿಬರೂರುಗೆ ಸಂಚರಿಸುವ ರಸ್ತೆಯಲ್ಲಿ, ಕಾವೇರಿವನದ ಬಳಿ ನೀರು ನಿಂತು, ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಯಿತು.ಕಳೆದ ಕೆಲವು ವರ್ಷಗಳಿಂದ ಮಳೆಗಾಲದಲ್ಲಿ ನಿರಂತರ ಈ ಸಮಸ್ಯೆ ಇರುತ್ತಿದ್ದು ಸಂಬಂಧಪಟ್ಟವರು ಗಮನಿಸಬೇಕಾಗಿದೆ.

