ಬಜಪೆ: *ಗ್ರೀನ್ ಬಜ್ಪೆ ಸವಿಸನ್ ಸಂಸ್ಥೆ ತ್ಯಾಜ್ಯ ವಿಲೇವಾರಿ ಘಟಕವನ್ನು ಯಶಸ್ವಿಯಾಗಿ ನಿರ್ವಹಸಿ ಮಾದರಿಯಾಗಿದ್ದು ಜಿಲ್ಲೆಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಇರುವಲ್ಲಿ ಘಟಕ ಅನುಷ್ಠಾನಕ್ಕೆ ಶಿಫಾರಸು ಮಾಡಬಹುದಾಗಿದೆ. ಈ ನಡುವೆ ಗ್ರಾ.ಪಂಗಳವರು ಈ ಬಗ್ಗೆ ಕಾಳಜಿ ವಹಿಸಿ ಮನೆಯ ಜನತೆ ತ್ಯಾಜ್ಯವನ್ನು ಪ್ರತ್ಯೇಕಿಸಿ ಹಾಕುವ ಬಗ್ಗೆ ಮನವರಿಕೆ ಮಾಡಬೇಕು ಇದನ್ನು ಆಂದೋಲನ ಮಾದರಿಯಲ್ಲಿ ಬೆಂಬಲಿಸಬೇಕು*. ಎಂದು ದ.ಕ ಜಿಲ್ಲಾ ಪಂಚಾಯತಿ ಕಾರ್ಯದರ್ಶಿ ಉಮೇಶ್ ಅವರು ಹೇಳಿದರು.
ಬಜಪೆಯ ಗ್ರೀನ್ ಬಜ್ಪೆ ಸರ್ವೆಸನ್ನ ತ್ಯಾಜ್ಯ ವಿಲೇವಾರಿ ಘಟಕವನ್ನು ಪರೀಶೀಲಿಸಿ ಕಾರ್ಯ ಚಟುವಟಿಕೆಗಳ ವಿಧಾನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತಿ ನೆರವು ಘಟಕದ ಯೋಜನಾಕಾರಿ ಮಂಜುಳಾ ಜತೆಗಿದ್ದರು. ಗ್ರೀನ್ ಬಜ್ಪೆ ಸರ್ವೆಸಸ್ನ ರೋಬರ್ಟ್ ಫಾಂಕ್ಲಿನ್ ರೇಗೋ, ಮಾಧವ ಎಂ ಅಮೀನ್, ರವಿಪೂಜಾರಿ, ಅರುನ್ ಪಿಂಟೋ ಜಿ.ಪಂ ಅಕಾರಿಗಳಿಗೆ ಮಾಹಿತಿ ನೀಡಿದರು.

