ಕಿನ್ನಿಗೋಳಿ, ಡಿ ಕೆ ರವಿ ಯಂತಹ ಪ್ರಾಮಾಣಿಕ ಅಧಿಕಾರಿ ಸಾವಿನಲ್ಲಿ ಕಾಣದ ಕೈಗಳ ಕೈವಾಡವಿದೆ, ಒಬ್ಬ ಧಕ್ಷ ಅಧಿಕಾರಿ ರಾಜಕೀಯ ಒತ್ತಡಕ್ಕೆ ಬಲಿಯಾಗಿದ್ದಾರೆ, ಜನರ ಭಾವನೆಗಳಿಗೆ ಧಕ್ಕೆಯಾಗಬಾರಧು ಕೂಡಲೇ ಇದನ್ನು ಸಿ.ಬಿ.ಐ ಗೆ ಒಪ್ಪಿ ಸಬೇಕು, ಇಂತಹ ಹತ್ತಾರು ಪ್ರಕರಣಗಳು ಮುಚ್ಹಿ ಹೋಗಿದೆ ಎಂದರು, ತೋಕೂರು-ಪಾದೂರು ಪೈಪಲೈನ್ ಯೋಜನೆಯ ಸರಿಯಾದ ಸರ್ವೆ ಕಾರ್ಯ ನಡೆದಿಲ್ಲ ಎಂಬುದು ನನ್ನ ಗಮನಕ್ಕೆ ಮಂದಿದೆ ಈ ಬಗ್ಗೆ ಸ್ಥಳೀಯರ ಮತ್ತು ಸಂಭದ ಪಟ್ಟವರ ಸಭೆಯಲ್ಲಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಕರೆಯಾಲಾಗುದು ಎಂದು ತಿಳಿಸಿದರು. ಯಾವುದೇ ಕಾರಣಕ್ಕೂ ಎಂಸಿಎಫ್ ಸ್ಥಗಿತಗೊಳಿಸುವುದಿಲ್ಲ.

ನಿಡ್ಡೋಡಿ ಉಪ್ಣ ವಿದ್ಯುತ್ ಸ್ತಾವರದ ಬಗ್ಗೆ ರಾಜ್ಯ ಸರಕಾರದಿಂದ ಪ್ರಸ್ತಾವ ಹೋಗಿದೆ ಡಿ, ಕೆ ಶಿವಕುಮಾರ್ ರಾಜ್ಯದಲ್ಲಿ ವಿದ್ಯುತ್ ಅಭಾವವಿರುದರಿಂದ ಉಷ್ಣ ವಿದ್ಯು ಸ್ಥಾವರವನ್ನು ಸ್ಥಾಪಿಸಲೇ ಬೇಕಾಗಿದೆ ಎಂದಿದ್ದಾರೆ. ಈ ಬಗ್ಗೆ ಅವರಲ್ಲಿ ಮಾತನಾಡಿ ನಿಡ್ದೋಡಿಯಲ್ಲಿ ಈ ಯೋಜನೆ ಬೇಡ ಯಾವುದಾದರೂ ಬಂಜರು ಭೂಮಿಯಲ್ಲಿ ಈ ಯೋಜನೆ ಪ್ರಾರಂಬಿಸಿ ಎಂದಿದ್ದೇನೆ, ಸುರತ್ಕಲ್ ಟೋಲ್ ಗೇಟ್ ಸ್ಥಳಿಯರ ವಿರೋಧ ವಿದ್ದರೆ ಈ ಟೋಲ್ ಗೇಟ್ ನಿರ್ಮಾಣ ಬೇಡ ಈ ಮುಂಚೆ ಸರ್ಕ್ಯೂಟ್ ಹೌಸ್ ನಲ್ಲಿ ಇದರ ಬಗ್ಗೆ ಸಭೆ ಕರೆದು ಚರ್ಚೆ ಪ್ರಾರಂಭಿಸುದನ್ನು ನಿಲ್ಲಿಸಿದ್ದೇನೆ, ಇಲ್ಲಿ ಅಲದಿದ್ದರೆ ಒಂದು ಕಿಲೋ ಮೀಟರ್ ಮುಂದಕ್ಕೆ ನಿರ್ಮಿ ಸಬೇಕಾಗುತ್ತದೆ, ಈ ಬಗ್ಗೆ ಸೋಮವಾರ ಜಿಲ್ಲಾಧಿಕಾರಿ ಮತ್ತು ಸ್ಥಳೀಯರ ಸಭೆ ಕರೆದು ಚರ್ಚಿಸಲಾಗುವುದು ಎಂದರು, ಮುಂದಿನ ದಿನಗಳಲ್ಲಿ ಮಂಗಳೂರು ಪೂರ್ಟ್ ಗೆ ಸ್ಮಾರ್ಟ್ ಸಿಟಿ ಬರುತ್ತೆ ರೈಲ್ವೆ ನಿಲ್ದ್ದಾಣವನ್ನು ವಿಶ್ವದರ್ಜೆಯ ರೈಲು ನಿಲ್ದ್ದಾಣವಾಗಿ ಪರಿವರ್ತನೆಯಾಗಲಿದೆ ಇದಕ್ಕೆ ಸರ್ವೆ ಕಾರ್ಯ ಪ್ರಾರಂಭಬಾಗಿದೆ ಯಾವುದ್ದಕ್ಕೂ ರಾಜ್ಯ ಸರಕಾರದ ಅಂಕಿತ ಅಗತ್ಯ ಎಂದರು ಈ ಸಂದರ್ಭ ಸುಚರಿತ ಶೆಟ್ಟಿ , ಭುವನಾಬಿರಾಮ ಉಡುಪ, ಜಗದೀಶ ಅಥಿಕಾರಿ, ಈಶ್ವರ್ ಕಟೀಲ್ ಇದ್ದರು.
