ಮೂಲ್ಕಿ: ಇಲ್ಲಿಗೆ ಸಮೀಪದ ಏಳಿಂಜೆಯ ಶೂಂಟಿಪಾಡಿ ಎಂಬಲ್ಲಿ ಸಾರ್ವಜನಿಕರಿಗೆ ಕಾಟ ಕೊಡುತ್ತಿದ್ದ ಚಿರತೆ ಕೊನೆಗೂ ಉರುಳಿಗೆ ಬಿದ್ದಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಜಮಾಯಿಸಿದ್ದು ಕುತೂಹಲದಿಂದ ನೋಡುತ್ತಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಮೂಲಕಿ ಪೊಲೀಸರು ಆಗಮಿಸಿದ್ದು ಚಿರತೆಯನನು ಕೊಂಡೊಯ್ಯಲು ಹರಸಾಹಸ ಪಡುತ್ತಿದ್ದಾರೆ.

ಇಲ್ಲಿ ಚಿರತೆಯೊಂದು ತನ್ನ ಮರಿಗಳ ಜೊತೆಗೆ ಹಲವಾರು ದಿನಗಳಿಂದ ಪ್ರತ್ಯಕ್ಷವಾಗಿ ಜನರಿಗೆ ಕಾಟಕೊಡುತ್ತಿತ್ತು. ಚಿರತೆಯನ್ನು ಹಿಡಿಯುವಂತೆ ಸ್ಥಳೀಯರು ಅರಣ್ಯಾಧಿಕಾರಿಗಳಿ ಮನವಿ ಸಲ್ಲಿಸಿದ್ದರು. ಕೊನೆಗ ಗ್ರಾಮಸ್ಥರ ಮನವಿಗೆ ಒಪ್ಪಿದ ಅಧಿಕಾರಿಗಳು ಸ್ಥಳದಲ್ಲಿ ಬೋನ್ ಹಾಗೂ ಉರುಳು ಅಳವಡಿಸಿದ್ದರು. ಆದರೆ ಆ ಉರುಳಿಗೆ ಚಿರತೆ ಬಿದ್ದಿದೆ.


