ಸುದ್ದಿ9 ಕಿನ್ನಿಗೋಳಿ
ಭಾರತೀಯ ಕಥೋಲಿಕ್ ಯುವ ಸಂಚಲನ ಕಿನ್ನಿಗೋಳಿ ವಲಯದ ದ್ವಿದಶಮಾನೋತ್ಸವದ ಅಂಗವಾಗಿ ಐ.ಸಿ.ವೈ.ಎಮ್. ಕಿನ್ನಿಗೋಳಿ ವಲಯ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ರಕ್ತದಾನ ಜಾಗೃತಿಗಾಗಿ ನಡಿಗೆ ಹಾಗೂ ಪುರುಷರಿಗಾಗಿ 7ಕಿ.ಮೀ. ಮತ್ತು ಮಹಿಳೆಯರಿಗಾಗಿ 5 ಕಿ. ಮೀ. ಮ್ಯಾರಾಥನ್ ಸ್ಪರ್ಧೆ ಭಾನುವಾರ ಕಿನ್ನಿಗೋಳಿ ಚರ್ಚ್ ಮೈದಾನದಲ್ಲಿ ನಡೆಯಿತು.
ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ| ಆಲ್ಫ್ರೆಡ್ ಜೆ. ಪಿಂಟೋ ಕಾರ್ಯಕ್ರಮ ಉದ್ಘಾಟಿಸಿದರು. ಸಹಾಯಕ ಧರ್ಮಗುರು ಫಾ| ವಿನೋದ್ ಲೋಬೋ, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಐ. ಸಿ. ವೈ. ಎಂ ನ ಮುಖ್ಯಸ್ಥ ಫಾ. ರೋನಾಲ್ಡ್ ಡಿಸೋಜ, ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ಕಿನ್ನಿಗೋಳಿಯ ಉದ್ಯಮಿ ರೋಜರ್ ಪಿಂಟೋ,

16KinniMarathan

ಲ್ಹಾ. ಕ್ರಿ. ಸಮುದಾಯ್ ಕೇಂದ್ರಿಕ್ ಸಮಿತಿ ಸಂಚಾಲಕ ಮೈಕಲ್ ಪಿಂಟೊ, ಲಯನ್ಸ್ ಅಧ್ಯಕ್ಷ ಕೃಷ್ಣ ಸಾಲ್ಯಾನ್, ಪೊಂಪೈ ಕಾಲೇಜಿನ ಎನ್ ಎಸ್ ಎಸ್ ಯೋಜನಾಧಿಕಾರಿ ಡಾ| ಗುಣಕರ್, ಲವಿನಾ ಡಿಸೋಜ ಬಳ್ಕುಂಜೆ , ಐ. ಸಿ. ವೈ. ಎಂ ಕಿನ್ನಿಗೋಳಿ ವಲಯಾಧ್ಯಕ್ಷೆ ಮೆಲ್ರೀಡ್ ರೊಡ್ರಿಗಸ್ , ಕಾರ್ಯದರ್ಶಿ ಮನೋಜ್ ಫೆರ್ನಾಂಡೀಸ್ ಮತ್ತಿತರರು ಉಪಸ್ಥಿತರಿದ್ದರು.
ಪುರುಷ ಮತ್ತು ಮಹಿಳೆಯರ ಮ್ಯಾರಾಥನ್ ಸ್ಪರ್ಧೆಯ ಎರಡು ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರಶಸ್ತಿ ಗಳಿಸಿಕೊಂಡರು.

By suddi9

Leave a Reply

Your email address will not be published. Required fields are marked *