ಸುದ್ದಿ 9ಮೂಡುಬಿದರೆ: ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅವರಿಗೆ ಉಡುಪಿ ಹಿರಿಯ ನಾಗರಿಕರ ಸಂಘದವರು ಹಿರಿಯನಾಗರಿಕ ಗುರುತಿನ ಚೀಟಿ ನೀಡಿ ಮಂಗಳವಾರ ವಿದ್ಯಾಗಿರಿಯ ರತ್ನಾಕರವಣರ್ಿ ವೇದಿಕೆಯಲ್ಲಿ ಸನ್ಮಾನಿಸಿದರು.
ಹಿರಿಯ ನಾಗರಿಕರಲ್ಲಿ ಆಗಾಧವಾದ ಜೀವಾನಾನುಭವಿರುತ್ತದೆ. ಇಳಿವಯಸ್ಸಿನಲ್ಲಿ ನಕಾರತ್ಮಕ ವಿಷಯಗಳತ್ತ ಮನಸ್ಸನ್ನು ಕೊಂಡೊಯ್ಯದೆ, ಆಶಾವಾದಿಗಳಾಗಿ ಬದುಕಬೇಕು. ಐಶರಾಮಿ ಜೀವನದ ಸೋಗಿನಲ್ಲಿ ಸಜ್ಜನರು ಕಡಿಮೆಯಾಗುತ್ತಿರುವುದು ದುರಂತ. ಜೀವನದ ಪ್ರತಿಹಂತಗಳನ್ನ ಸಮರ್ಥವಾಗಿ ಎದುರಿಸುತ್ತಾ ಬಂದಿರುವ ಹಿರಿಯ ನಾಗರಿಕರು ಮನಸ್ಸು ಬೆಸೆದು ಕಟ್ಟುವುದರ ಮೂಲಕ ಸಮಾಜಕ್ಕೆ ಕೊಡುಗೆ ನೀಡಬಲ್ಲರು ಎಂದರು.
100 ಜನ ಹಿರಿಯನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಂಘಟನೆಯ ಉಪಾಧ್ಯಕ್ಷ ಎ.ಪಿ.ಕೊಡಂಚ ಸ್ವಾಗತಿಸಿದರು. ಭುವನಪ್ರಸಾದ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ವಿಶ್ವನಾಥ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದಶರ್ಿ ಸಿ.ಎಸ್.ರಾವ್ ವಂದಿಸಿದರು.
