ಬಂಟ್ವಾಳ: ಕಲ್ಲಡ್ಕ ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯು 49 ನೇ ವರ್ಷದ ಶ್ರೀ ಶಾರದಾ ಪೂಜಾ ಉತ್ಸವದ ಮಹಾಸಭೆಯು ರವಿವಾರ ಕಲ್ಲಡ್ಕ ದ.ಕ.ಜಿ.ಪಂ ಶಾಲಾ ವಠಾರದಲ್ಲಿ ಜರುಗಿತು.
ಈ ಸಂದರ್ಭ 49 ನೇ ವರ್ಷದ ಶ್ರೀ ಶಾರದಾ ಪೂಜಾ ಉತ್ಸವ ಸಮಿತಿಗೆ ನೂತನ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು.ನೂತನ ಅದ್ಯಕ್ಷರಾಗಿ ಗಣೇಶ್ ಶೆಟ್ಟಿ ಅವರುಆಯ್ಕೆಯಾಗಿದ್ದಾರೆ.


ಉಪಾದ್ಯಕ್ಷರಾಗಿ ಶಿವರಾಮ ಕುಕ್ಕಮಜಲು, ಜ್ಯೋತಿ ನಾಗರಾಜ್ ರಾಮನಗರ,ಪ್ರದಾನ ಕಾರ್ಯದರ್ಶಿಯಾಗಿ *ರಾಜೇಶ್.ಕೆ.,ಜೊತೆ ಕಾರ್ಯದರ್ಶಿಯಾಗಿ ರವಿ ರೈ ಕುಕ್ಕಮಜಲು,ಕೋಶಾದಿಕಾರಿಯಾಗಿ ದಿನೇಶ್ ಕೃಷ್ಣಕೋಡಿ,
ಕ್ರೀಡಾ ಕಾರ್ಯದರ್ಶಿಯಾಗಿ ಪ್ರಶಾಂತ್ ಆಳ್ವ, ಸಂದೇಶ್ ಅಂಚನ್, ಉಷಾ ಪುರುಶೋತ್ತಮ್, ರೇಣುಕಾ ಚಂದ್ರಶೇಖರ್,ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ *ಜಯಶಂಕರ ಶೆಟ್ಟಿ, ಸತೀಶ್ ಗೌಡ ಪುಷ್ಪಾಂಜಲಿ, ಲೀಲಾವತಿ ಕುಕ್ಕಮಜಲು, ಸುಧಾ ವಿಕ್ರಂ ರಾಮನಗರ,ಸಂಘಟನಾ ಕಾರ್ಯದರ್ಶಿಯಾಗಿ *ಶಶಿಕಿರಣ್ ಆಚಾರ್ಯ ರಾಮನಗರ,
ಭಜನಾ ಸಂಚಾಲಕರಾಗಿ ಸತೀಶ್ ಆಚಾರ್ಯ ರಾಮನಗರ ಮತ್ತು ಚಂದ್ರಿಕಾ ಯೋಗೀಶ್ ಕಲ್ಲಡ್ಕ ಆಯ್ಕೆಯಾದರು. ಪ್ರತಿಷ್ಠಾನದ ಅದ್ಯಕ್ಷರಾದ ಯತೀನ್ ಕುಮಾರ್ ಪ್ರಸ್ತಾವನೆಗೈದರು. ಪ್ರತಿಷ್ಠಾನದ ಕಾರ್ಯದರ್ಶಿ ವಜ್ರನಾಥ ಕಲ್ಲಡ್ಕ ಸ್ವಾಗತಿಸಿದರು. ಪ್ರತಿಷ್ಠಾನದ ಕೋಶಾದಿಕಾರಿ ರಾಜೇಶ್ ಕೊಟ್ಟಾರಿ ವಂದಿಸಿದರು.
