ನಾಗರಿಕ ಕ್ರಿಯಾ ಸಮಿತಿ ಸಂಚಯಗಿರಿ ನೂತನ ಅಧ್ಯಕ್ಷರಾಗಿ ಸುರೇಶ್ ಬಂಗೇರ ಪುನರಾಯ್ಕೆ

ಬಂಟ್ಚಾಳ: ನಾಗರಿಕ ಕ್ರಿಯಾ ಸಮಿತಿ ಸಂಚಯಗಿರಿ ಇದರ 2025- 26ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಸುರೇಶ್ ಬಂಗೇರವರು ಪುನರಾಯ್ಕೆಯಾಗಿದ್ದಾರೆ. ಬಿ.ಸಿ.ರೋಡಿನ ಸಂಚಯ ಗಿರಿಯ ನರಸಿಂಹ ಹೊಳ್ಳ ಕಲಾ ವೇದಿಕೆಯಲ್ಲಿ ನಡೆದ ಸಮಿತಿಯ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಹರೀಶ ಶೆಣೈ(ಕಾರ್ಯದರ್ಶಿ),ತಾಯಮ್ಮ ( ಉಪಾಧ್ಯಕ್ಷೆ),ಎ.ದಾಮೋದರ್ (ಕೋಶಾಧಿಕಾರಿ),ನರಸಿಂಹರಾಜ ಹೂಳ್ಳ (ಗೌರವಾಧ್ಯಕ್ಷರು) , ಧನಂಜಯ ಬಾಳಿಗ (ಕ್ರೀಡಾಕಾರ್ಯದರ್ಶಿ),ಸಮಿತಿ ಸದಸ್ಯರುಗಳಾಗಿ ಸಂಕಪ್ಪ ಶೆಟ್ಟಿ, ಪಾಂಡುರಂಗ ನಾಯಕ್ ,ಸುಧಾಕರ್ ಸಾಲಿಯಾನ್, ಪುರಂದರ ಶೆಟ್ಟಿ ,ಪ್ರಭಾಕರ ಪ್ರಭು, ದಾಮೋದರ ಗೌಡ ,ರಾಘವೇಂದ್ರ ಬನ್ನಿಂತಾಯ, ಸತೀಶ್ ಬಂಗೇರ ,ಶೇಖರ್ ಕುಲಾಲ್, ಪ್ರದೀಪ್ ,ಪವಿತ್ರ ಕುಮಾರ್ ,ಪ್ರಿಯಾಲತ, ಭವತಾರಿಣಿ, ರೀಟ ಆಯ್ಕೆಯಾಗಿದ್ದಾರೆ.