ಬಂಟ್ವಾಳ: ಹೊಕ್ಕಾಡಿಗೋಳಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭ
ಬಂಟ್ವಾಳ: ಹೊಕ್ಕಾಡಿಗೋಳಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭ ನಡೆಯಿತು.ಶ್ರೀ ಕ್ಷೇತ್ರ ಪೂಂಜಾದ ಅಸ್ರಣ್ಣರಾದ ಕೃಷ್ಣಪ್ರಸಾದ್ ಆಚಾರ್ಯ ಅವರು ಧ್ವಜಾರೋಹಣ ಮಾಡಿದರು. ಶಾಲಾ ಎಸ್ ಡಿಎಂಸಿ ಅಧ್ಯಕ್ಷರಾದ ದಿನೇಶ್ ಹುಲಿಮೇರು ಇವರ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ನಿವೃತ್ತ ಮುಖ್ಯ ಶಿಕ್ಷಕರಾದ ಕೃಷ್ಣಪ್ಪ ಮಾಸ್ಟರ್, ರಾಜು ಪೂಜಾರಿ, ರುಕ್ಮಯ್ಯ ಪೂಜಾರಿ ಹಾಗೂ ಪ್ರಾ. ಶಾ. ಶಿ. ಕೋಶಾಧಿಕಾರಿ ರಾಜೇಶ್ ನೆಲ್ಯಾಡಿ ಇವರನ್ನು ಸನ್ಮಾನಿಸಲಾಯಿತು.
ವಿವಿಧ ಸ್ಪರ್ಧೆಗಳ ವಿಜೇತರಿಗೆ ಹಾಗೂ ಶಾಲೆಯ ಎಲ್ಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕರಾದ ಸುಚಿತ್ರ, ಮೆಟಿಲ್ದಾ ಡಿಸೋಜ, ಶುಭವತಿರವರು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಡಾಕ್ಟರ್ ಸ್ಮೃತಿ ಯು,ರೋಟರಿ ಜೋನಲ್ ಲೆಫ್ಟಿನೆಂಟ್ ಗಣೇಶ್ ಶೆಟ್ಟಿ ,ಸಿಎ ಬ್ಯಾಂಕ್ ಮಾಜಿ ನಿರ್ದೇಶಕ ರಮೇಶ್ ಮಂಜಿಲಾ,ಉದ್ಯಮಿಗಳದಾ ಮನೋಜ್ ಕುಮಾರ್, ಕಿರಣ್ ಮಂಜಿಲಾ ಶಿಕ್ಷಣ ಸಂಯೋಜಕರಾದ ಸಿದ್ದಲಿಂಗ ಸ್ವಾಮಿ,ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಸುಮಿತ್ರ ಎಸ್ ಸ್ವಾಗತಿಸಿ, ಕು.ಸುತಿಕ್ಷ ವಂದಿಸಿದರು. ಸಿಲ್ವಿಯ ಮಿರಾಂದ ಕಾರ್ಯಕ್ರಮ ನಿರೂಪಿಸಿದರು. . ಸಂಜೆ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದ ಸಭಾ ಕಾರ್ಯಕ್ರಮವು ಅರಂಬೋಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ ಚಂದ್ರ ಜೈನ್ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು.ಸಿದ್ಧಕಟ್ಟೆ ಕೊಡಂಗೆಕಂಬಳ ಸಮಿತಿ ಅಧ್ಯಕ್ಷ
ಸಂದೀಪ್ ಶೆಟ್ಟಿ ಪೊಡುಂಬ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಸ್ಥಳೀಯ ಪ್ರಮುಖರಾದ ಹರೀಶ್ ಹಿಂಗಾಣಿ, ಆನಂದ ಬೃಂದಾವನ, ರಮೇಶ್ ಮಂಜಿಲ, ಲಕ್ಷ್ಮಿ ಕಾಂತರಬೆಟ್ಟು ಇವರನ್ನು ಅಭಿನಂದಿಸಲಾಯಿತು. ಹಾಗೆಯೇ ದುರ್ಗಾ ಪೂಜಾರಿ, ರಘುಚಂದ್ರ ಅವರ ಅನುಪಸ್ಥಿತಿಯಲ್ಲಿ ಅವರ ಕುಟುಂಬದವರನ್ನು ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ದಿವಂಗತರಾದ ಜಾರಪ್ಪ ಪೂಜಾರಿ ಹಿಂಗಾಣಿ, ಅಬ್ಬಾಸ್ ಹೊಕ್ಕಾಡಿಗೋಳಿ,ಅಶೋಕ ಕುಮಾರ್ ಚೌಟ,ಆನಂದ ಹಿಂಗಾಣಿ ,ಶಿವಪ್ಪ ಪೂಜಾರಿ, ವಾಸು ಪೂಜಾರಿ ಚೀಂಕ್ರ ಪೂಜಾರಿ, ಗಂಗಯ್ಯ ಶೆಟ್ಟಿಗಾರ್, ಅಣ್ಣು ಪೂಜಾರಿ ಕಾಂತರಬೆಟ್ಟು ಇವರ ಸಂಬಂಧಿಗಳನ್ನು ಗೌರವಿಸಲಾಯಿತು.
ಅರಾಂಬೋಡಿ ಗ್ರಾ.ಪಂ. ಉಪಾಧ್ಯಕ್ಷೆ ತೇಜಸ್ವಿನಿ, ಸದಸ್ಯರಾದ ಪ್ರಭಾಕರ್ ಎಚ್, ಸುರೇಂದ್ರ ಉಪಸ್ಥಿತರಿದ್ದರು. ಬೆಳ್ತಂಗಡಿಬಿ ಐ ಇ ಆರ್ ಟಿ ಜಗದೀಶ್ ಹೆಚ್. ಉದ್ಯಮಿ ರಕ್ಷಣ್ ಮೇಲಾಂಟ, ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ಅಧ್ಯಕ್ಷ ಸುರೇಶ್ ಶೆಟ್ಟಿ,ಸಿದ್ದಕಟ್ಟೆ ಪಲ್ಗುಣಿ ರೋಟರಿ ಕ್ಲಬ್ ಅಧ್ಯಕ್ಷ ಶಿವಯ್ಯ ಎಸ್ ಎಲ್ ಪಲ್ಗುಣಿ, ಹೊಕ್ಕಾಡಿಗೋಳಿ ಕಂಬಳ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ , ಸಿದ್ದಕಟ್ಟೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು,ಉದ್ಯಮಿ ನಿಶಿತ್ ಡಿ ಹಿಂಗಾಣಿ,ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ದಿನೇಶ್ ಹುಲಿಮೇರು,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ಭಟ್ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಲಾ ವಾರ್ಷಿಕೋತ್ಸವದ ಯಶಸ್ವಿಗೆ ಸಹಕರಿಸಿದವರನ್ನು ಅಭಿನಂದಿಸಲಾಯಿತು. ಮುಖ್ಯ ಶಿಕ್ಷಕಿ ಸುಮಿತ್ರ ಎಸ್ ವರದಿ ವಾಚಿಸಿದರು. ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷರಾದ ರಾಘವೇಂದ್ರ ಭಟ್ ಸ್ವಾಗತಿಸಿ, ಶಾಲಾ ಎಸ್ಡಿಎಂಸಿ ಉಪಾಧ್ಯಕ್ಷೆ ಶುಭವತಿ ವಂದಿಸಿದರು. ಶಿಕ್ಷಕಿಯರಾದ ಶ್ರೀಮತಿ ಸುಚಿತ್ರ, ಶ್ರೀಮತಿ ಮೆಟಿಲ್ದಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.