ಪೊಳಲಿಉಚಿತ ನೇತ್ರ ತಪಾಸಣಾ ಹಾಗೂ ವೈದ್ಯಕೀಯ ಶಿಬಿರ
ಪೊಳಲಿ:ಧರ್ಮಜ್ಯೋತಿ ಫ್ರೆಂಡ್ಸ್ ಸರ್ಕಲ್ ಟ್ರಸ್ಟ್ ರಿ ಕಲ್ಕುಟ-ಪೊಳಲಿ ಇವರ ವತಿಯಿಂದ ,ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಮತ್ತು ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇವರ ಸಹಕಾರದೊಂದಿಗೆ ಡಿ.1ರಂದು ಭಾನುವಾರ ಪೊಳಲಿಸರ್ವಮಂಗಳ ಸಭಾಭವನದಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ವೈದ್ಯಕೀಯ ಶಿಬಿರವು ನಡೆಯಿತು.
ಈ ಸಂಧರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಶ್ರೀ ಜರಾಜೇಶ್ವರಿ ದೇವಸ್ಥಾನ ಪೊಳಲಿ ಯ ಆಡಳಿತ ಮೊಕ್ತೇಸರರಾದಂತ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು , ವೆಂಕಟೇಶ್ ನಾವಡ ಪೊಳಲಿ, ಸೇವಾಂಜಲಿ ಪ್ರತಿಷ್ಠಾನದ ಮುಖ್ಯಸ್ಥರಾದಂತ ಕೃಷ್ಣ ಕುಮಾರ್ ಪೂಂಜ, ಚಂದ್ರಹಾಸ್ ಪಲ್ಲಿಪಾಡಿ, ಸುಕೇಶ್ ಚೌಟ ಬಡಕಬೈಲು ,ಯಶವಂತ್ ಕೋಟ್ಯಾನ್ ಪೊಳಲಿ, ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಧರ್ಮಜ್ಯೋತಿ ಫ್ರೆಂಡ್ಸ್ ಸರ್ಕಲ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.ಊರಿನ ಹಾಗೂ ಪರವೂರಿನ 300ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು .