ಬಂಟ್ವಾಳ: ವಕೀಲರ ಸಂಘದ ವತಿಯಿಂದ ವಿಧಿ ವಿಜ್ಞಾನ ಜಾಗ್ರತಿ ಕಾರ್ಯಾಗಾರ

ವಕೀಲರ ಸಂಘ ಬಂಟ್ವಾಳ ಮತ್ತು CLUE 4 EVIDENCE FOUNDATION ಇದರ ಜಂಟಿ ಆಶ್ರಯದಲ್ಲಿ ಶುಕ್ರವಾರದಂದು (ನ.15) ವಿಧಿ ವಿಜ್ಞಾನ ಜಾಗ್ರತಿ ಕಾರ್ಯಾಗಾರವನ್ನು ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ CLUE 4 FOUNDATION ನ ನಿರ್ದೇಶಕರಾದ ಪನೀOಧರ್ B N ಆಗಮಿಸಿದರು. ಹಾಗೂ ಅವರು ವಕೀಲರಿಗೆ ವಿಧಿ ವಿಜ್ಞಾನದ ಜಾಗ್ರತಿಯ ಅಗತ್ಯತೆ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.
ಕೇಂದ್ರ ಸರಕಾರ ಹೊಸದಾಗಿ ಜಾರಿಗೆ ತಂದ ಭಾರತೀಯ ನ್ಯಾಯ ಸಂಹಿತೆ ಕಾನೂನಿನಲ್ಲಿ 3 ವರ್ಷಕ್ಕಿಂತ ಮೇಲ್ಪಟ್ಟ ಶಿಕ್ಷೆಯ ಅಪರಾಧಗಳಿಗೆ ವಿಧಿ ವಿಜ್ಞಾನದ ವರದಿ ಕಡ್ಡಾಯವಾಗಿದೆ. ಆದುದರಿಂದ ವಕೀಲರಿಗೆ ವಿಧಿ ವಿಜ್ಞಾನದ ಬಗ್ಗೆ ಮಾಹಿತಿ ಅತೀ ಅಗತ್ಯವಾಗಿದ್ದು, ಮುಂದಿನ ದಿನಗಳಲ್ಲಿ ಸಾಮಾನ್ಯ ಅಪರಾಧ ಕಡಿಮೆಯಾಗಳಿದ್ದು, ಡಿಜಿಟಲ್ ಅಪರಾಧಗಳು ಹೆಚ್ಚಾಗಳಿದ್ದು ಡಿಜಿಟಲ್ ಅಪರಾಧಗಳ ಬಗ್ಗೆ ಪ್ರತಿ ವಕೀಲರು ಜ್ಞಾನ ಹೊಂದಿರಬೇಕು ಎಂದು ವಿವರವಾದ ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಭಾಗ್ಯಮ್ಮ ರವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶ್ರೀ ಕೃಷ್ಣಮೂರ್ತಿ ಏನ್ ರವರು ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿದ್ದರು. ವಕೀಲರ ಸಂಘ (ರಿ), ಬಂಟ್ವಾಳದ ಅಧ್ಯಕ್ಷರು ರಿಚರ್ಡ್ ಕೊಸ್ತಾ ಎಂ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ರವೀಂದ್ರ ಕುಕ್ಕಾಜೆಯವರು ನಿರ್ವಹಿಸಿದರು. ಅತಿಥಿ ಅಭ್ಯಾಗತರಿಗೆ ವೀರೇಂದ್ರ ಎಂ ಸಿದ್ದಕಟ್ಟೆಯವರು ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಕಿರಿಯ ವಕೀಲ ಮಿತ್ರರು ಭಾಗವಹಿಸಿದರು.