Published On: Mon, Oct 21st, 2024

ಸಿದ್ಧಕಟ್ಟೆ: ಸಬ್ ಜ್ಯೂನಿಯರ್  ‘ಕಂಬಳ ಕೂಟ’ದ ಫಲಿತಾಂಶ

ಬಂಟ್ವಾಳ: ತಾಲೂಕಿನ ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆಯಲ್ಲಿ ರೋಟರಿಕ್ಲಬ್ ಲೊರೆಟ್ಟೋ ಹಿಲ್ಸ್  ವತಿಯಿಂದ ಶನಿವಾರ ನಡೆದ ಸಬ್ ಜ್ಯೂನಿಯರ್ ನೇಗಿಲು ಮತ್ತು ಹಗ್ಗ ವಿಭಾಗದ ‘ರೋಟರಿ ಕಂಬಳ ಕೂಟ’ದ ಫಲಿತಾಂಶ ಪ್ರಕಟಗೊಂಡಿದೆ. ವಿಜೇತರಿಗೆ ಪ್ರಥಮ ಅರ್ಧ ಪವನ್ ಮತ್ತು ದ್ವಿತೀಯ ಕಾಲು ಪವನ್ ಚಿನ್ನದ ಪದಕ ಹಾಗೂ ತೃತೀಯ ಮತ್ತು ಚತುರ್ಥ ಬಹುಮಾನವಾಗಿ ತಲಾ ರೂ 5 ಸಾ.ರೂ. ನಗದು ನೀಡಿ ಗೌರವಿಸಲಾಯಿತು.

ಸಬ್ ಜ್ಯೂನಿಯರ್ ಹಗ್ಗ ವಿಭಾಗ:

ಪ್ರಥಮ: ಎಂಬತ್ತು ಬಡಗುಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ (ಬಿ.). ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ.

ದ್ವಿತೀಯ: ಬಳ್ಕುಂಜೆಗುತ್ತು ಮಲ್ಲಿಕಾ ಯಶವಂತ ಶೆಟ್ಟಿ.  ಓಡಿಸಿದವರು: ಬೈಂದೂರು ಕೆರ್ಗಲ್ ಗರಡಿಮನೆ ಹರೀಶ ಪೂಜಾರಿ.

ತೃತೀಯ: ಮಾರೂರು ಬಿರ್ನೊಟ್ಟು ಅಶ್ವಥ್ ಶೆಟ್ಟಿ.  ಓಡಿಸಿದವರು: ಅತ್ತೂರು ಕೊಂಡಗೆ ಸುಧೀರ್ ಸಾಲ್ಯಾನ್.

ಚತುರ್ಥ: ಸಿದ್ಧಕಟ್ಟೆ ಕೆರೆಬಳಿ ಲತೀಫ್  ಓಡಿಸಿದವರು: ಸಿದ್ಧಕಟ್ಟೆ ಪ್ರಸಾದ್.

ನೇಗಿಲು ವಿಭಾಗ:

ಪ್ರಥಮ:  ಶ್ರೀ ಸ್ವಾಮಿ ಧಾಮ ಹೊಳೆಕಟ್ಟು ಕುಂಭಾಶ್ರೀ, ಓಡಿಸಿದವರು: ಬೈಂದೂರು ಮಂಜುನಾಥ ಗೌಡ

ದ್ವಿತೀಯ: ಮುಡಾರು ಹಚ್ಚೊಟ್ಟು ಫ್ಲೋರಾ ನಿವಾಸ ರೋಹನ್ ರಂಜಿತ್ ಫೆರ್ನಾಂಡಿಸ್ (ಎ.)ಓಡಿಸಿದವರು: ಕಕ್ಯಪದವು ಮಹಮ್ಮಾಯಿ ಗೌತಮ್,ತೃತೀಯ: ಅನಂತಾಡಿ ವೈಶಾಕ್ ವೈಭವ ಮಡಿವಾಳ (ಎ.), ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ,ಚತುರ್ಥ: ಮೊಗರುಗುತ್ತು ನಿತಿನ್ ದಿವಿನ್ ರೈ,ಓಡಿಸಿದವರು: ಪಡುಸಕೂರು ಪೃಥ್ವಿರಾಜ್ ಪೂಜಾರಿ

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ,ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ,ಬಂಟ್ಚಾಳ ರೋಟರಿಕ್ಲಬ್ ಅಧ್ಯಕ್ಷ ಬೇಬಿಕುಂದರ್,ಮಾಜಿ ಅಧ್ಯಕ್ಷ ,ನ್ಯಾಯವಾದಿ ಅಶ್ವನಿಕುಮಾರ್ ರೈ,

ರೋಟರಿಯನ್ ಗಳಾದ ಪ್ರಕಾಶ್ ಕಾರಂತ್ ,ಪದ್ಮನಾಭ ರೈ,ಸೇಸಪ್ಪ ಮಾಸ್ಟರ್,ರಾಘವೇಂದ್ರಭಟ್,ಅವಿಲ್ ಮೆನೇಜಸ್ ,

ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ನಾವೂರ,ಧಾರ್ಮಿಕಪರಿಷತ್ ಸದಸ್ಯ ದೇವಪ್ಪ ಕುಲಾಲ್ ಸಹಿತ ಹಲವಾರು ಗಣ್ಯರು ಭಾಗವಹಿಸಿದ್ದರು.

ರೋಟರಿಕ್ಲಬ್ ಲೊರೆಟ್ಟೋ ಹಿಲ್ಸ್ ಅಧ್ಯಕ್ಷ ಸುರೇಶ್ ಶೆಟ್ಟಿ ಸ್ವಾಗತಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter