Published On: Wed, Oct 9th, 2024

ಸುಬ್ರಮಣ್ಯ: ಕುಮಾರ ಪರ್ವತ ಚಾರಣ ಆರಂಭಿಸಿದ ಮೊದಲ ತಂಡ

ಪುಷ್ಪಗಿರಿ ಚಾರಣ ಎಂದೂ ಕರೆಯಲ್ಪಡುವ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯ ಕುಮಾರ ಪರ್ವತ ಚಾರಣವು ಮಂಗಳವಾದಿಂದ ಆರಂಭಗೊಂಡಿದೆ. ಅರಣ್ಯ ಇಲಾಖೆಯ ಹೊಸ ಮಾರ್ಗ ಸೂಚಿಯೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಪರ್ವತ ಚಾರಣಕ್ಕೆ ಅವಕಾಶ ನೀಡಲಾಗಿದೆ.

ಕುಮಾರ ಪರ್ವತ ಚಾರಣಕ್ಕೆ ತೆರಳುವ ಚಾರಣಿಗರು ಆನ್‌ಲೈನ್‌ ಮೂಲಕ ಬುಕ್‌ ಮಾಡಿಕೊಂಡಿದ್ದು, ಈಗಾಗಲೇ ನೋಂದಾಯಿಸಿದ ಮೊದಲ ತಂಡವು ಹೊಸ ಮಾರ್ಗಸೂಚಿಯ ಪ್ರಕಾರವಾಗಿ ಕುಕ್ಕೆ ಸುಬ್ರಹ್ಮಣ್ಯದ ದೇವಗದ್ದೆ ಮೂಲಕ ಚಾರಣ ಕೈಗೊಂಡಿದ್ದಾರೆ. ಸೋಮವಾರದಂದು (ನಿನ್ನೆ) ಚಾರಣ ಕೈಗೊಂಡ ಈ ಮೊದಲ ತಂಡದಲ್ಲಿ ಒಂಬತ್ತು ಮಂದಿ ಚಾರಣಿಗರು ಇದ್ದಾರೆ. ಕಳೆದ ವರ್ಷದವರೆಗೆ ಕುಮಾರಪರ್ವತ ಚಾರಣ ಸುಲಭದಾಯಕವಾಗಿತ್ತು. ಆದರೆ ಈ ಬಾರಿ ಚಾರಣದ ನಡುವೆ ತಂಗಲು ನಿರ್ಬಂಧ ಹೇರಲಾಗಿರುವ ಕಾರಣ ಚಾರಣಿಗರು ಒಂದೇ ದಿನದಲ್ಲಿ ಚಾರಣ ಮುಗಿಸಬೇಕಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter