Published On: Thu, Oct 3rd, 2024

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನ ಸನ್ನಿಧಾನದಲ್ಲಿ ನವರಾತ್ರಿ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನ ಸನ್ನಿಧಾನದಲ್ಲಿ ನವರಾತ್ರಿ ಮಹೋತ್ಸವವು ಅಕ್ಟೋಬರ್ 3 ರಿಂದ ಅಕ್ಟೋಬರ್ 11 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಇಂದು ಸನ್ನಿಧಾನದಲ್ಲಿ ನವರಾತ್ರಿ ಮಹೋತ್ಸವಕ್ಕೆ ಶ್ರೀಕ್ಷೇತದ ಪ್ರಧಾನ ಅರ್ಚಕರಾದ ಪವಿತ್ರಪಾಣಿ ಮಾಧವ ಭಟ್‌ ವಿದ್ಯುಕ್ತವಾಗಿ ಚಾಲನೆ ನೀಡಿದರು. ಜೊತೆಗೆ ಅರ್ಚಕರಾದ ಕೆ. ರಾಮ್‌ ಭಟ್‌, ಅನಂತ ಪದ್ಮನಾಭ ಭಟ್‌ , ಅನುವಂಶಿಕ ಆಡಳಿತ ಮುಕ್ತೇಸರರಾದ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆ ಗುತ್ತು, ಪೊಳಲಿ ವೆಂಕಟೇಶ್‌ ನೌಡ, ಮತ್ತಿತರರು ಉಪಸ್ಥಿತರಿದ್ದರು. ನವರಾತ್ರಿ ಪೂಜೆಯು ಪ್ರತೀ ನಿತ್ಯ ರಾತ್ರಿ 8:00 ಗಂಟೆಗೆ ನಡೆಯಲಿದ್ದು, ಪ್ರತಿದಿನ ಮಧ್ಯಾಹ್ನ ಭಕ್ತಾದಿಗಳಿಂದ ಹರಕೆಯ ಚಂಡಿಕಾಹೋಮವೂ ಸೇರಿದಂತೆ ಅಕ್ಟೋಬರ್ 11 ರಂದು ಶುಕ್ರವಾರ ಮಹಾನವಮಿ ಪ್ರಯುಕ್ತ ದೇವಳದ ವತಿಯಿಂದ ಚಂಡಿಕಾಹೋಮವೂ ಜರಗಲಿದೆ. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಲಿದೆ.
3-10-2024 ಗುರುವಾರದಂದು ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಸ್ವರಾಭಿಷೇಕ ” ಶ್ರೀ ರಾಮಕಥಾ ” ಗಾನ ಸುಧಾ ಹಾಗೂ ಕುಸಲ್ದ ಗುರಿಕಾರೆ ದಿನೇಶ್‌ ಕೊಡಪದವು ಸಾರಥ್ಯದಲ್ಲಿ ಜಿಲ್ಲೆಯ ಪ್ರಸಿದ್ಧ ಹಾಸ್ಯ ಕಲಾವಿದರ ಸಮಾಗಮದೊಂದಿಗೆ ಯಕ್ಷ ತೆಲಿಕೆ ನಾಟಕವು ನಡೆಯಲಿದೆ.

  • 4-10-2024 ಶುಕ್ರವಾರದಂದು ನಾಟ್ಯಾಲಯ ಟ್ರಸ್ಟ್ (5) ನಾಟ್ಯ ವಿಧುಷಿ ಶ್ರೀಮತಿ ಸುಮ ದಾಮೋದ‌ ಮತ್ತು ಶಿಷ್ಯ ವೃಂದದವರಿಂದ ಸಂಗೀತ ನೃತ್ಯ ವೈಭವ ಹಾಗೂ ಮಂಗಳೂರಿನ ಖ್ಯಾತ ಸಪ್ತಸ್ವರ ಆರ್ಕೆಸ್ಟ್ರಾ ಪ್ರಭಾಕರ್ ತಣ್ಣೀರುಬಾವಿ ತಂಡದವರಿಂದ ಭಕ್ತಿ ರಸ ಮಂಜರಿ ಕಾರ್ಯಕ್ರಮ.
  • 5-10-2024 ಶನಿವಾರದಂದು ಯಕ್ಷಕಲಾ ಪೊಳಲಿ ಇದರ 29 ವರ್ಷದ ವರ್ಷಂತುತ್ಸವದ ಅಂಗವಾಗಿ ಪೊಳಲಿ ಯಕ್ಷ ಉತ್ಸವ 2024, ಜಿಲ್ಲೆಯ ಸುಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಕಚ್ಚರ ಮಾಲ್ದಿ (ತುಳು) – ಭಾರತ ರತ್ನ ಯಕ್ಷಗಾನ ಬಯಲಾಟ.
  • 6-10-2024 ಆದಿತ್ಯವಾರದಂದು ವಿಧುಷಿ ಶ್ರೀಮತಿ ವಿದ್ಯಾ ಮನೋಜ್ ಕಲಾನಿಕೇತನ ಡ್ಯಾನ್ಸ್‌ ಫೌಂಡೇಶನ್ (ರಿ), ಕಲ್ಲಡ್ಕ ಇವರ ಶಿಷ್ಯ ವೃಂದದವರಿಂದ ದೇವಿ ಭವತಾರಿಣಿ ಭರತನಾಟ್ಯ ಕಾರ್ಯಕ್ರಮ ಹಾಗೂ ಥಂಡರ್ ಗೈಸ್ (ರಿ) ಬಜಪೆ ತಂಡದವರಿಂದ – ಕ್ಷೇತ್ರ ಪುರಾಣ ಮಂಜರಿ ಭಕ್ತಿ ಭಾವದ ನೃತ್ಯ ಸಂಗಮ ಕಾರ್ಯಕ್ರಮ.
  • 07-10-2024 ಸೋಮವಾರದಂದು ಆರ್ಯಭಟ ಪ್ರಶಸ್ತಿ ಸರಸ್ಥತ ಕಥಾ ಸಾರಥಿ ತೋನ್ಸೆ ಶ್ರೀ ಪಷ್ಟಲ್ ಕುಮಾರ್ ಅವರಿಂದ ಹರಿಕಥಾ ಕಾಲಕ್ಷೇಪ ಸತಿ ಸಾವಿತ್ರಿ ಹಾಗೂ ನೃತಾ ಸುಧಾ (ರಿ) ಮಂಗಳೂರು ವಿಧುಷಿ ಶ್ರೀಮತಿ ಸೌಮ್ಯ ಸುಧೀಂದ್ರ ರಾವ್ ಶಿಷ್ಯೆಯರಿಂದ ನೃತ್ಯಾರ್ಪಣಂ.
  • 8-10-2024 ಮಂಗಳವಾರದಂದು ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ಭೀಷ್ಮ ವಿಜಯ
  • 9-10-2024 ಬುಧವಾರದಂದು ರಾಮಕೃಷ್ಣ ತಪೋವನ ಪೊಳಲಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ಮೋಹನ್ ಕುಮಾರ್ ಅಮ್ಮುಂಜೆ ಇವರ ನಿರ್ದೇಶನದಲ್ಲಿ ಯಕ್ಷಗಾನ ಬಯಲಾಟ ವೀರ ಬಬ್ರುವಾಹನ – ಅಗ್ರಪೂಜೆ ಹಾಗೂ ಶಿವರಂಜಿನಿ ಕಲಾ ಕೇಂದ್ರ ಪೊಳಲಿ / ಬೊಕ್ಕಸ ಅವರಿಂದ ವಿಶಿಷ್ಟ ಕಾರ್ಯಕ್ರಮ ಕಲಾ ಸಂಗಮ
  • 10-10-2024 ಗುರುವಾರದಂದು ಸುನೀತಾ ಜಯಂತ ನಾಟ್ಯ ನಿಲಯ ಉಳ್ಳಾಲ ಇವರಿಂದ ಭರತನಾಟ್ಯ ಹಾಗೂ ಜನಪದ ನೃತ್ಯ ಕಾರ್ಯಕ್ರಮ, ಶ್ರೀಮತಿ ವಂದನಾ ಮೂರ್ತಿ ಬೆಂಗಳೂರು ತಂಡವರಿಂದ ಸುಗಮ ಸಂಗೀತ
  • 11-10-2024 ಶುಕ್ರವಾರದಂದು ನವರಾತ್ರಿ ವೇಷಗಳ ಸಂಭ್ರಮ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿದೆ.
    ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಲಿದ್ದಾರೆ. ಸುದ್ದಿ 9 ಚಾನೆಲ್ ನಲ್ಲಿ ರಾಜರಾಜೇಶ್ವರೀ ದೇವಸ್ಥಾನ ಸನ್ನಿಧಾನದಲ್ಲಿ ನವರಾತ್ರಿ ಮಹೋತ್ಸವ ಪ್ರಯುಕ್ತ ನಡೆಯುವ ಎಲ್ಲಾ ಕಾರ್ಯಕ್ರಮಗಳ ನೇರ ಪ್ರಸಾರವಿರಲಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter