ಪೊಳಲಿ: ಶ್ರೀ ಕ್ಷೇತ್ರ ಪೊಳಲಿಗೆ  ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳು ಸೋಮವಾರ ಭೇಟಿ ನೀಡಿ  ಶ್ರೀ ರಾಜರಾಜೇಶ್ವರಿ ದೇವಿಯ  ದರ್ಶನ ಪಡೆದರು.

 ದೇವಳದ ತಂತ್ರೀಗಳಾದ ಸುಬ್ರಹ್ಮಣ್ಯ ತಂತ್ರಿ, ವೆಂಕಟೇಶ್‌ ತಂತ್ರಿ , ಹಾಗೂ ದೇವಳದ ಪ್ರಧಾನ ಅರ್ಚಕರಾದ ಮಾಧವ ಭಟ್‌, ಪರಮೇಶ್ವರ ಭಟ್‌ , ಕೆ.ರಾಮ್‌ ಭಟ್‌, ಅನಂತ ಭಟ್‌, ಪದ್ಮನಾಭ ಭಟ್‌ ಹಾಗೂ ದೇವಳದ ಅರ್ಚಕರು  ಶ್ರೀಗಳನ್ನು ಕ್ಷೇತ್ರಕ್ಕೆ ಕೊಂಬು ವಾಲಗದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು. 

ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಕಾರ್ಯನಿರ್ವಹಣಾಧಿಕಾರಿ ಚಂದ್ರಮೋಹನ್‌ , ಕೋಡಿಮಜಲ್‌ ಅನಂತಪದ್ಮನಾಭ ಉಪಾಧ್ಯಾಯ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *