Published On: Tue, Sep 17th, 2024

ನಿರಂತರ ಹೋರಾಟದ ಫಲವಾಗಿ ಬಿಜೆಪಿ ಬೆಳೆದಿದೆ.: ಚೆನ್ನಪ್ಪ ಕೋಟ್ಯಾನ್

ಬಂಟ್ವಾಳ:   ಭಾರತೀಯ ಜನತಾ ಪಕ್ಷವು ಜನಸಂಘದ ಪ್ರಾರಂಭದ ದಿನಗಳಲ್ಲಿಯೂ  ಪ್ರತಿಕೂಲ ವಾತಾವರಣಗಳ ಸವಾಲುಗಳ ನಡುವೆಯೂ ಹಿರಿಯರ ಮತ್ತು ಕಾರ್ಯಕರ್ತರ ನಿರಂತರ ಹೋರಾಟದ ಫಲಪ್ರದವಾಗಿ ಬಿಜೆಪಿ ಇಷ್ಟು ಎತ್ತರಕ್ಕೆ ಬೆಳೆದು ನಿಂತಿದೆ. ಈ ನಿಟ್ಟಿನಲ್ಲಿ ಪ್ರಪಂಚದಲ್ಲಿಯೇ ಏಕೈಕ ಅತೀ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೋಮ್ಮಿದೆ. ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಂಘಟನೆ ಮಾಡುವ ಮೂಲಕ ಪಕ್ಷ ವನ್ನು ಸತತವಾಗಿ ಅಧಿಕಾರಕ್ಕೆ ತರುವಲ್ಲಿ ಕಾರ್ಯಕರ್ತರು ಶ್ರಮಿಸಬೇಕು‌ ಎಂದು ಬಂಟ್ವಾಳ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್  ಕರೆ ನೀಡಿದರು.

 ಸಿದ್ದಕಟ್ಟೆಯಲ್ಲಿ ರವಿವಾರ  ಭಾರತೀಯ ಜನತಾ ಪಾರ್ಟಿಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸಂಗಬೆಟ್ಟು ಮಹಾಶಕ್ತಿಕೇಂದ್ರದ ಕಾರ್ಯಕಾರಿಣಿ  ಸಭೆಯಲ್ಲಿ‌ಭಾಗವಹಿಸಿ ಅವರು ಮಾತನಾಡಿದರು. ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಸತೀಶ್ ಪುಜಾರಿ ಅವರು ಅದ್ಯಕ್ಷತೆ ವಹಿಸಿದ್ದರು. 

ಯುವಕರು ಪ್ರಧಾನಿ ಮಂತ್ರಿ ಯವರ ಮನ್ ಕೀ ಬಾತ್ ವಿಕ್ಸಣೆ ಮಾಡುವುದರ ಜೊತೆಗೆ ಬಿಜೆಪಿ ಸದಸ್ಯರಾಗಿ ಸದಸ್ಯತ್ವ ಅಭಿಯಾನ ಯಶಸ್ವಿ ಗೊಳಿಸ ಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಸದಸ್ಯತನ ಅಭಿಯಾನದ  ಸಂಚಾಲಕರಾದ ಸಂದೇಶ ಶೆಟ್ಟಿ ಅಭಿಯಾನದ ಬಗ್ಗೆ ಮಾಹಿತಿಯನ್ನು ನೀಡಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ  ಸಂಘಟನೆಯ ಕುರಿತು ಮಾತಾನಾಡಿದರು.

ಮಂಡಲ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ  ಮಂಡಲಕಾರ್ಯದರ್ಶಿ ಗಳಾದ ಜನಾರ್ದನ ಬೊಂಡಾಲ, , ಪ್ರಭಾಕರ ಪ್ರಭು, ಸಂಜೀವ ಪೂಜಾರಿ, ಬಿಜೆಪಿ ಬಂಟ್ವಾಳ ಮಂಡಲದ ಯುವ ಮೋರ್ಚಾ ಅಧ್ಯಕ್ಷ ದಿನೇಶ್ ಶೆಟ್ಟಿ ದಂಬೆದಾರ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ದಿನೇಶ್ ಅಮ್ಟೂರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರುಗಳು ಹಾಗೂ ಬೂತ್ ಸಮಿತಿಯ ಪದಾಧಿಕಾರಿಗಳು ಮಂಡಲ ಮೋರ್ಚಾದ ಪದಾಧಿಕಾರಿಗಳು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.  ಸಂಗಬೆಟ್ಟು ಮಹಾ ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಸಂತೋಷ ರಾಯಿಬೆಟ್ಟು  ಸ್ವಾಗತಿಸಿ, ಮಂಡಲದ ಕಾರ್ಯದರ್ಶಿ ರಶ್ಮಿತ್ ಶೆಟ್ಟಿ  ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter