ಉಡುಪಿ : ಕಾರಿನಲ್ಲಿ ಮಲಗಿದ್ದ ವ್ಯಕ್ತಿ ಉಸಿರುಗಟ್ಟಿ ಸಾವು

ವ್ಯಕ್ತಿಯೊಬ್ಬರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಆ ಬಳಿಕ ಹೊರಗಡೆ ಪಾರ್ಕ್ ಮಾಡಲಾಗಿದ್ದ ಕಾರ್ನಲ್ಲಿ ಮಲಗಿದ್ದ ಚಾಲಕನು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ.ಚಿಕ್ಕಮಗಳೂರು ಮೂಲದ ಕಾರು ಚಾಲಕ ಆನಂದ (37) ಮೃತಪಟ್ಟವರು ಎನ್ನಲಾಗಿದೆ.
ಈ ಚಾಲಕನು ಕಾರಿನಲ್ಲಿ ಚಿಕಿತ್ಸೆಗೆಂದು ವ್ಯಕ್ತಿಯೊಬ್ಬರನ್ನು ಕರೆದುಕೊಂಡು ಬಂದಿದ್ದರು. ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಉಳಿದುಕೊಳ್ಳಲು ಆಸ್ಪತ್ರೆಯಲ್ಲಿ ವ್ಯವಸ್ಥೆ ಇರದ ಕಾರಣ ಹೊರಗಡೆ ಪಾರ್ಕ್ ಮಾಡಿದ್ದ ಕಾರಿನಲ್ಲಿಯೇ ಮಲಗಿದ್ದಾರೆ.
ಇದನ್ನೂ ಓದಿ: ನೋಡು ನೋಡುತ್ತಿದ್ದಂತೆ ಸಮುದ್ರ ಅಲೆಗೆ ಕೊಚ್ಚಿಕೊಂಡು ಹೋದ ಪ್ರವಾಸಿಗರು, ವಿಡಿಯೋ ಇಲ್ಲಿದೆ ನೋಡಿ
ಆದರೆ ಈ ವೇಳೆ ಕಾರಿನ ಗ್ಲಾಸನ್ನು ಸಂಪೂರ್ಣವಾಗಿ ಮುಚ್ಚಿ ಎಸಿ ಹಾಕಿ ಮಲಗಿಕೊಂಡಿದ್ದರ ಪರಿಣಾಮ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈ ಘಟನೆಗೆ ಸಂಬಂಧ ಪಟ್ಟಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.