Published On: Thu, Aug 15th, 2024

ಮಂಗಳೂರು : ಶಿಕ್ಷಣದಲ್ಲಿ ‌ಎಲ್ಲವನ್ನು ಸಹ ಕೇಂದ್ರದಿಂದಲೇ ನಿಯಂತ್ರಣ ಮಾಡುತ್ತೇವೆ ಎಂದರೆ ಅದು ಒಳ್ಳೆಯದಲ್ಲ :ಸಚಿವ ದಿನೇಶ್ ಗುಂಡೂರಾವ್

ನೀಟ್​​ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಪರೀಕ್ಷೆಯನ್ನು ರದ್ದು ಮಾಡಲಾಗಿತ್ತು. ಈ ನೀಟ್ ಪರೀಕ್ಷೆ ಅಕ್ರಮ ವ್ಯವಹಾರಕ್ಕೆ ಸಂಬಂಧ ಪಟ್ಟಂತೆ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ನಾವು ಮೆಡಿಕಲ್ ಕಾಲೇಜು ಮಾಡಿ ಬೇರೆ ಕಡೆಯಿಂದ ಬಂದು ಡಾಕ್ಟರ್ ಓದಿಕೊಂಡು ಹೋಗುತ್ತಿದ್ದಾರೆ. ಆದರೆ ನೀಟ್ ಪದ್ದತಿಯಿಂದ ನಮ್ಮ ಕಾಲೇಜಿನಲ್ಲಿ ನಮ್ಮ ಡಾಕ್ಟರ್ಸ್ ಗೆ ಸೀಟು ಸಿಗುತ್ತಿಲ್ಲ. ಭಾರತದ ಬೇರೆ ಬೇರೆ ಕಡೆಯಿಂದ ಬಂದು ಸೀಟ್ ತೆಗೆದುಕೊಂಡು ಹೋಗುತ್ತಾರೆ. ಆದರೆ ನಮ್ಮ ಮಕ್ಕಳಿಗೆ ಸೀಟ್ ಸಿಗುತ್ತದೆ ಎನ್ನುವ ಯಾವುದೇ ಗ್ಯಾರಂಟಿ ಇಲ್ಲ, ಈ ನೀಟ್ ಬಗ್ಗೆ ‌ಚರ್ಚೆ ಮಾಡಬೇಕಿದೆ ಎಂದಿದ್ದಾರೆ.

ಶಿಕ್ಷಣದಲ್ಲಿ ‌ಎಲ್ಲವನ್ನು ಸಹ ಕೇಂದ್ರದಿಂದಲೇ ನಿಯಂತ್ರಣ ಮಾಡುತ್ತೇವೆ ಎಂದರೆ ಅದು ಒಳ್ಳೆಯದಲ್ಲ. ಆದರೆ ನಾವು ಸಹ ನೀಟ್ ಗೆ ವಿರೋಧ ವ್ಯಕ್ತಪಡಿಸಿದ್ದೇವೆ. ನಾವು ಹೆಚ್ಚು ಮೆಡಿಕಲ್ ಕಾಲೇಜು ಮಾಡಿದ್ದೇವೆ. ನೂರಾರು ಕೋಟಿ ಖರ್ಚು ಮಾಡಿ‌ ಸರ್ಕಾರ ಮೆಡಿಕಲ್ ಕಾಲೇಜು ಮಾಡಿದೆ. ಆದರೆ ಇದರ ಪ್ರಯೋಜನ ನಮ್ಮ ಮಕ್ಕಳಿಗೆ ಸಿಗುತ್ತಿಲ್ಲ ಎಂದು ಸಚಿವರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಜಿಲ್ಲಾಡಳಿತ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ, ಸಚಿವ ದಿನೇಶ್ ಗುಂಡೂರಾವ್ ಧ್ವಜಾರೋಹಣ

ಮುಂದುವರೆದು ಮಾತನಾಡಿ, ದೇಶದಲ್ಲಿ ಎಲ್ಲವನ್ನೂ ಕೇಂದ್ರದಿಂದಲೇ ನಿಯಂತ್ರಣ ಮಾಡುವುದು ಒಳ್ಳೆದಲ್ಲ. ನಾವು ಹೇಳಿದ ಪ್ರಕಾರ ಆಗಬೇಕು ಎನ್ನುವಂತಿದೆ. ಆದರೆ ಪಾರ್ಲಿಮೆಂಟ್ ನಲ್ಲಿ ಕಾನೂನು ತಿದ್ದುಪಡಿ ಆಗಬೇಕು, ಈ ನೀಟ್ ಪರಿಷ್ಕರಣೆ ಮಾಡುವುದಕ್ಕೆ ಕ್ರಮ ಕೈಗೊಳ್ಳುತ್ತರಾ ಎಂದು ನೋಡಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter