ಗುರುಪುರ ಕೈಕಂಬದ ಸ್ವಾಗತ್ ಹೋಟೆಲ್ನಲ್ಲಿ ವಿಭಿನ್ನ ರೀತಿಯಲ್ಲಿ ಸ್ವಾತಂತ್ರ್ಯ ದಿನದ ಆಚರಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಗಿತ್ತು. ಅನೇಕ ಕಡೆ ಶಾಸಕರು, ಸಚಿವರು, ಅಧಿಕಾರಿಗಳು ಕೂಡ ಸ್ವಾತಂತ್ರ್ಯ ದಿನಾಚರಣೆಗಳನ್ನು ಆಚರಣೆ ಮಾಡಿದ್ದಾರೆ. ಹಲವು ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲೂ, ಬೇರೆ ಬೇರೆ ಸಂಘ – ಸಂಸ್ಥೆಗಳು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಭಾರೀ ವಿಭಿನ್ನವಾಗಿ ಆಚರಣೆಯೊಂದನ್ನು ಹೋಟೆಲ್ ಮಾಲೀಕರೊಬ್ಬರು ಮಾಡಿದ್ದಾರೆ.
ಗುರುಪುರ ಕೈಕಂಬದ ಸ್ವಾಗತ್ ಹೋಟೆಲ್ನಲ್ಲಿ ಒಂದು ವಿಭಿನ್ನ ರೀತಿಯಲ್ಲಿ ಸ್ವಾತಂತ್ರ ದಿನಾಚರಣೆಯನ್ನು ಮಾಡಲಾಗಿತ್ತು. ಸ್ವಾಗತ್ ಹೋಟೆಲ್ ಸಿಬ್ಬಂದಿ ಸೇರಿ ಈ ಆಚರಣೆಯನ್ನು ಸಂಭ್ರಮದಿಂದ ಮಾಡಿದ್ದಾರೆ. ಪ್ರತಿ ವರ್ಷ ಈ ರೀತಿಯಲ್ಲೇ ಆಚರಣೆ ಮಾಡುತ್ತಾರೆ. ಸ್ವಾತಂತ್ರ್ಯ ದಿನದಂದು ಈ ಹೋಟೆಲ್ ಸಿಬ್ಬಂದಿಗಳಿಗೆ ರಜೆಯನ್ನು ನೀಡಿ ಸ್ವಾತಂತ್ರ್ಯ ಆಚರಣೆ ಮಾಡಲಾಗುವುದು.

ಸ್ವಾಗತ್ ಹೋಟೆಲ್ ಮಾಲೀಕರು ಕೂಡ ಈ ಸಂಭ್ರಮದಲ್ಲಿ ಭಾಗವಹಿಸುತ್ತಾರೆ. ಹೋಟೆಲ್ ಮಾಲೀಕ ಜಗದೀಶ್ ಅವರು ಈ ರೀತಿಯ ಸಂಪ್ರಾದಾಯವನ್ನು ಮಾಡಿಕೊಂಡು ಬಂದಿದ್ದಾರೆ. ಹೋಟೆಲ್ ಟೇಬಲ್ ಮೇಲೆ ವಿಭಿನ್ನ ರೀತಿಯ ರಂಗೋಲಿಗಳನ್ನು ಬಿಡಿಸಿ, ಸ್ವಾತಂತ್ರ್ಯ ದಿನಾಚರಣೆಯನ್ನು ಮಾಡುತ್ತಾರೆ. ಪರಿವಾಳ, ಭಾರತದ ಭೂಪಟ ಈ ರೀತಿಯ ರಂಗೋಲಿಗಳನ್ನು ಬಿಡಿಸಿ, ಸ್ವಾತಂತ್ರ್ಯ ದಿನವನ್ನು ಸಂಭ್ರಮಿಸುತ್ತಾರೆ.