Published On: Thu, Aug 15th, 2024

ಕುಂದಾಯ ಮಜಲಿನಲ್ಲಿ ಅಕ್ರಮವಾಗಿ ಬಂಡೆ ಸ್ಪೋಟ ಹಲವು ಮನೆಗಳಿಗೆ ಹಾನಿ: ರೈ ಭೇಟಿ

ಬಂಟ್ವಾಳ: ಪುತ್ತೂರು, ಸುಳ್ಯ ಕ್ಷೇತ್ರದ ವ್ಯಾಪ್ತಿಗೆ ನೇತ್ರಾವತಿ ನದಿಯಿಂದ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಬಂಟ್ವಾಳ
ತಾಲೂಕಿನ ಶಂಭೂರು ಗ್ರಾಮದ ಕುಂದಾಯ ಮಜಲು ಎಂಬಲ್ಲಿ ಅಕ್ರಮವಾಗಿ ಬಂಡೆಗಳನ್ನು ಸ್ಪೋಟಿಸುವುದರಿಂದ ಹಲವು ಮನೆಗಳಿಗೆ ಹಾನಿಯಾಗಿದ್ದು,ಮಾಜಿ ಸಚಿವ ರಮಾನಾಥ ರೈ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಶಂಭೂರು ಮತ್ತು ಬಾಳ್ತಿಲಗ್ರಾಮದ ಗಡಿ ಪ್ರದೇಶವಾದ ಕುಂದಾಯಮಜಲಿನಲ್ಲಿ ಜಾಕ್ ವೆಲ್ ನಿರ್ಮಾಣ ಕಾಮಗಾರಿಯು ನಡೆಯುತ್ತಿದ್ದು, ಈ ಪ್ರದೇಶದಲ್ಲಿ  ಸುಮಾರು 65 ಮನೆಗಳಿಗೆ  ಹಾನಿಯಾಗಿದ್ದು ಇದರಿಂದಾಗಿ ಅಲ್ಲಿನ ಜನರು  ಭಯ ಭೀತರಾಗಿದ್ದಾರೆ. ಕಾಮಗಾರಿ ಮುಂದುವರಿದರೆ ಇನ್ನಷ್ಟು ಹಾನಿ ಉಂಟಾಗುವ ಸಂಭವ ಇದೆ.ಈ ಹಿನ್ನಲೆಯಲ್ಲಿ  ಸ್ಥಳೀಯರ ಅಪೇಕ್ಷೆಯಂತೆ ಸ್ಥಳಕ್ಕಾಗಮಿಸಿದ ಮಾಜಿ ಸಚಿವರಾದ ಬಿ. ರಮಾನಾಥ ರೈ ಸ್ಥಳ ಪರಿಶೀಲಿಸಿದರು.


ಬಳಿಕ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಬಂಟ್ವಾಳ ತಾಲೂಕಿನಲ್ಲಿ ಅನುಷ್ಠಾನಗೊಂಡಿರುವ ಬಹುಗ್ರಾಮಕುಡಿಯುವ ನೀರು ಯೋಜನೆಗೆ ನೇತ್ರಾವತಿಯೇ ಜಲಮೂಲವಾಗಿದೆ.ಇದರಿಂದ ಭವಿಷ್ಯದದಿನಗಳಲ್ಲಿ ನೇತ್ರಾವತಿಯಲ್ಲ ನೀರಿನ ಮೂಲಕ್ಕೆ ತೊಂದರೆಯಾಗುವ ಸಾಧ್ಯತೆ ಇದ್ದು,ಹಾಗಾಗಿ ಹೊರತಾಲೂಕಿನ ಕುಡಿಯುವ ನೀರಿನ ಯೋಜನೆಗೆ ಕುಮಾರಧಾರ ನದಿಮೂಲವನ್ನು ಬಳಸುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ನರಿಕೊಂಬು ಗ್ರಾ.ಪಂ.ಮಾಜಿ ಅಧ್ಯಕ್ಷ ಆನಂದ ಸಾಲಿಯಾನ್ , ಕೂಸಪ್ಪ ಪೂಜಾರಿ ಕುಂದಾಯ ಮಜಲು,ಚಂದಪ್ಪ ಪೂಜಾರಿ ಕುಂದಾಯ ಮಜಲು,ಮೋನಪ್ಪ ಮುಗೇರ ಪಡ್ಪು,ಗಿಲ್ಬಾರ್ಟ್ ಬುಕೆಲೋ,ಪಾಣೆಮಂಗಳೂರು ಬ್ಲಾಕ್ ಕಾಂಗ್ರಸ್ ನಿಕಟಪೂರ್ವ ಅಧ್ಯಕ್ಷ ಸುದೀಪ್ ಕುಮಾರ್ ರೈ ಮೊದಲಾದವರು ಉಪಸ್ಥಿತರಿದ್ದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter