Published On: Wed, Aug 14th, 2024

ಮಂಗಳೂರು: ಆಟಿದ ಕೂಟ ಕಾರ್ಯಕ್ರಮದಲ್ಲಿ ತಳುನಾಡಿನ ದೈವಗಳಿಗೆ ಅವಮಾನ ಮಾಡಿದ ಇಬ್ಬರು ಮಹಿಳೆಯರು

ದಕ್ಷಿಣ ಕನ್ನಡದ ಪ್ರತಿಯೊಂದು ಕಲೆ ಆದರದೇ ಆಗಿರುವ ಪದ್ಧತಿ ಇದೆ. ಮಂಗಳೂರಿನ ಸಂಸ್ಕೃತಿಗೆ ಮಹತ್ವದ ಪರಂಪರೆ ಇದೆ. ಅದನ್ನು ಅವಮಾನಿಸುವುದು ಸರಿಯಲ್ಲ. ಇಂತಹ ಶ್ರೀಮಂತ ಕಲೆಗಳಲ್ಲಿ ಹಾಗೂ ದಕ್ಷಿಣ ಕನ್ನಡ ಕಾರ್ಣಿಕ ದೈವಗಳಿಗೆ ಅವಮಾನಿಸುವುದು ಎಷ್ಟು ಸರಿ ಹೇಳಿದೆ. ಇದೀಗ ಇಂತಹ ಅಮಾನೀಯ ಘಟನೆಯೊಂದು ನಡೆದಿದೆ. ಕಾರ್ಯಕ್ರಮವೊಂದರಲ್ಲಿ ದೈವ ಆವಾಹನೆ ರೀತಿ ನೃತ್ಯ ಮಾಡಿದ ದೈವಗಳಿಗೆ ಅವಮಾನ ಮಾಡಿದ್ದಾರೆ ಎಂದು ಹೇಳಲಾಗಿದೆ.

ಇದೀಗ ನರ್ತನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ವಿರೋಧ ವ್ಯಕ್ತವಾಗಿದೆ. ಈ ವಿಚಾರವಾಗಿ ದೈವರಾಧಕರಿಂದ ವಿರೋಧ ವ್ಯಕ್ತವಾಗಿದೆ. ಮಂಗಳೂರು ನಗರದ ಯೆಯ್ಯಾಡಿ‌ ಎಂಬಲ್ಲಿ ಈ ಈ ಘಟನೆ ನಡೆದಿದೆ.

ಇದನ್ನೂ ಓದಿ: ಬಾಂಗ್ಲಾದಂತೆ ಭಾರತದಲ್ಲೂ ಆಗಬಹುದು ಈಗಲೇ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು: ಪೇಜಾವರ ಶ್ರೀ

ಖಾಸಗಿ ಸಭಾಂಗಣವೊಂದರಲ್ಲಿ ನಡೆದ ಆಟಿದ ಕೂಟ ಎಂಬ ಕಾರ್ಯಕ್ರಮ ನಡೆಯುತ್ತಿತ್ತು. ದೈವದ ಸಾಂಗ್​​​ ಒಂದಕ್ಕೆ ದೈವ ಆವಾಹನೆ ರೀತಿ ನರ್ತನ ಮಾಡಿದ್ದಾರೆ. ತಾಸೆ, ವಾದ್ಯದ ಸದ್ದಿಗೆ ಇಬ್ಬರು ಮಹಿಳೆಯರು ದೈವದಂತೆ ಕುಣಿದಿದ್ದಾರೆ. ಇದೀಗ ಈ ವಿಡಿಯೋ ನೋಡಿದ ಅನೇಕ ದೈವ ನರ್ತನಕ್ಕೆ ಅಪಚಾರ ಎಸಗಿದವರು ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter