Published On: Sat, Jul 27th, 2024

ಮೂಳೂರು ಶ್ರೀ ಮುಂಡಿತ್ತಾಯ ) ದೈವಸ್ಥಾನ ಕಟ್ಟೆಯ ಬೃಹತ್ ಅಶ್ವತ್ಥ ವೃಕ್ಷ ಧರಾಶಾಹಿ

ಕೈಕಂಬ : ಶುಕ್ರವಾರ ಸಂಜೆ ಬೀಸಿದ ಸುಳಿಗಾಳಿ ಮಳೆಗೆ ಗುರುಪುರ ಕುಕ್ಕುದಕಟ್ಟೆಯ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನಕ್ಕೆ ಹೊಂದಿಕೊAಡಿರುವ (ಅಶ್ವತ್ಥ)ಕಟ್ಟೆಯಲ್ಲಿದ್ದ ಅತಿ ಹಳೆಯ ಬೃಹತ್ ಅಶ್ವತ್ಥ ವೃಕ್ಷ ಬುಡಸಹಿತ ಕಿತ್ತು ಬಿದ್ದ ಘಟನೆ ಸಂಭವಿಸಿದೆ.

ದೈವಸ್ಥಾನಕ್ಕೆ ಸಂಬAಧಿಸಿದAತೆ ಈ ವೃಕ್ಷ ಹಾಗೂ ಕಟ್ಟೆಗೆ ವಿಶೇಷ ಸ್ಥಾನಮಾನವಿದೆ. ವಾರ್ಷಿಕ ದೊಂಪದ ಬಲಿ ಹಾಗೂ `ಬಂಡಿ’ ಉತ್ಸವದ ಸಂದರ್ಭದಲ್ಲಿ ಮುಂಜಾನೆ ಭಂಡಾರದ ಮನೆಯಿಂದ ಭಂಡಾರ ಹೊರಟು ಈ ಕಟ್ಟೆಗೆ ಪ್ರದಕ್ಷಿಣೆ(ಬಲಿ) ಬಂದು ದೈವಸ್ಥಾನ ಪ್ರವೇಶಿಸುವ ಪ್ರತೀತಿ ಇದೆ. ದೈವಸ್ಥಾನಕ್ಕೆ ಒಳಪಟ್ಟಿರುವ ಗುತ್ತಿನ ಮನೆಗಳಲ್ಲಿ ಧರ್ಮನೇಮೋತ್ಸವ ನಡೆಯುವ ಸಂದರ್ಭದಲ್ಲೂ ಈ ಸಂಪ್ರದಾಯವಿದೆ. ಕಟ್ಟೆಯಲ್ಲಿ ವಾರ್ಷಿಕ ಸಾರ್ವಜನಿಕ ಸತ್ಯನಾರಾಯಣ ಪೂಜೆಯೂ ನಡೆಯುತ್ತಿತ್ತು.

ಈ ಮರಕ್ಕೆ ಸುಮಾರು ೩೦೦-೩೫೦ ವರ್ಷ ಆಗಿರಬಹುದೆಂದು ಸ್ಥಳೀಯರು ಹೇಳುತ್ತಾರೆ. ಮರ ಬೀಳುತ್ತಲೇ ಕೊಂಬೆಯೊAದು ಮುರಿದು ದೈವಸ್ಥಾನದ ಗೋಪುರದ ಮೇಲ್ಛಾವಣಿಗೆ ಬಿದ್ದಿದ್ದು, ಗೋಪುರಕ್ಕೆ ಹಾನಿಯುಂಟಾಗಿದ್ದರೆ, ಎರಡು ತೆಂಗಿನ ಮರಗಳು ಅಪ್ಪಚ್ಚಿಯಾಗಿವೆ. ದೈವಸ್ಥಾನ ಹಾಗೂ ಭಂಡಾರದ ಮನೆಗೆ ಅಡ್ಡಲಾಗಿ ಮರ ಬಿದಿದ್ದು, ಪ್ರವೇಶಕ್ಕೆ ಅಡಚಣೆ ಉಂಟಾಗಿದೆ. ಮೊದಲಿಗೆ ಕೊಂಬೆಗಳು ಮುರಿದು ಬಿದ್ದರೆ, ಬಳಿಕ ಸಂಪೂರ್ಣ ವೃಕ್ಷ ಬುಡಸಹಿತ ಕಿತ್ತು ಬಿದ್ದಿದೆ. ಹಾಗಾಗಿ ಜನವಸತಿಗೆ ಯಾವುದೇ ಅಪಾಯ ಸಂಭವಿಸಿಲ್ಲ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter