Published On: Thu, Jun 6th, 2024

ಸುಧೆಕ್ಕಾರು ಶ್ರೀ ರಕ್ತೇಶ್ವರಿ ದೇವಸ್ಥಾನದ ವಠಾರದಲ್ಲಿ ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಪುಲ್ ಶೆಟ್ಟಿ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ  ವಿಜ್ಞಾನ ಸಂಘದ ಆಶ್ರಯದಲ್ಲಿ ಬಾಳ್ತಿಲ ಗ್ರಾಮದ ಸುಧೆಕ್ಕಾರು ಶ್ರೀ ರಕ್ತೇಶ್ವರಿ ದೇವಸ್ಥಾನದ ವಠಾರದಲ್ಲಿ ಬಂಟ್ವಾಳ ವಲಯ ಅರಣ್ಯಾಧಿಕಾರಿ ಪ್ರಪುಲ್ ಶೆಟ್ಟಿ ಅವರು ವಿದ್ಯಾರ್ಥಿಗಳ ಜೊತೆ ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

 ಅತಿಥಿಯಾಗಿದ್ದ ಬಂಟ್ವಾಳ ವಲಯ ಉಪ ಅರಣ್ಯಾಧಿಕಾರಿ, ರವಿರಾಜ್ .ಬಿ ಮಾತಾನಾಡಿ “ಸಸಿ ನೆಡುವುದು ಕೇವಲ ಪರಿಸರ ದಿನಾಚರಣೆಗೆ  ಮಾತ್ರ ಸೀಮಿತವಾಗಿರದೆ  ಉಳಿದ ಸಂದರ್ಭದಲ್ಲಿಯು ಮನೆ ಹಾಗೂ ಶಾಲೆಯ ಸುತ್ತಮುತ್ತ  ಗಿಡ ನೆಟ್ಟು ನೀರು ಹಾಕಿ ಪೋಷಿಸಬೇಕು, ವಿಜ್ಞಾನ ಸಂಘದಿಂದ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಖುಷಿಯ ವಿಚಾರ , ಪರಿಸರದ ದೃಷ್ಟಿಯಿಂದ  ಮುಂದಿನ ದಿನದಲ್ಲು ಈ ರೀತಿಯ  ಕೆಲಸ ಮಾಡುವಂತೆ  ತಿಳಿಸಿದರು.

 ಅಧ್ಯಾಪಕರಾದ ಸುಮಂತ್ ಮಕ್ಕಳಿಗೆ ಪರಿಸರದ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿನಿಯಾದ ಮಾನಸ ವೈಯಕ್ತಿಕ ಗೀತೆಯನ್ನು ಹಾಡಿದಳು.  ಮಾಣಿ ವಲಯ ಗಸ್ತು ವನಪಾಲಕರು ರಾಘವೇಂದ್ರ , ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಚಂದ್ರಶೇಖರ್ ಸಾಲ್ಯಾನ್ ,ಜಯರಾಮ ಸುಧೆಕ್ಕಾರು,  ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ,ಪಿ. ಕೆ. ಪದ್ಮನಾಭ  ಅಧ್ಯಾಪಕರಾದ ಅನ್ನಪೂರ್ಣ, ಜ್ಯೋತಿಶ್ರಿ, ರಕ್ಷಿತಾ, ಬಾಲಕೃಷ್ಣ, ವಾಣಿಶ್ರೀ, ಮಾಲತಿ ಉಪಸ್ಥಿತರಿದ್ದರು. 

 ವಿದ್ಯಾರ್ಥಿಗಳಾದ  ಧನ್ಯ ಸ್ವಾಗತಿಸಿ, ಶಶಾಂಕ ವಂದಿಸಿದರು.ಪ್ರಾಪ್ತಿ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter