Published On: Thu, Dec 28th, 2023

ಹಿಂದೂ ಸಮಾಜವನ್ನು ಒಗ್ಗೂಡಿಸುವ ಕೆಲಸ ದೇವಸ್ಥಾನಗಳಿಂದಾಗಬೇಕು: ಬಾಲಕೃಷ್ಣ ಕೊಟ್ಟಾರಿ

ಬಂಟ್ವಾಳ: ಹಿಂದೂ ಧಾರ್ಮಿಕ ವಿಚಾರಗಳನ್ನು ತಿಳಿ ಹೇಳುವ ನಿಟ್ಟಿನಲ್ಲಿ  ಹಿಂದೂ ಸಮಾಜವನ್ನು ಒಗ್ಗೂಡಿಸುವ ಕೆಲಸ ದೇವಸ್ಥಾನಗಳಿಂದಾಗ ಬೇಕಾಗಿದೆ ಎಂದು ಮಂಗಳೂರು ಕೊಂಚಾಡಿ ಶ್ರೀ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನದ ಮೊಕ್ತೇಸರ ಬಾಲಕೃಷ್ಣ ಕೊಟ್ಟಾರಿ ಹೇಳಿದ್ದಾರೆ.

ಬುಧವಾರ ಬಂಟ್ವಾಳ ತಾ.ನ ಬೊಂಡಾಲ ಶ್ರೀಮಹಾಗಣಪತಿ ದೇವಸ್ಥಾನದ ದ್ವಿತೀಯ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ, 32 ನೇ ವರ್ಷದ ಯಕ್ಷಗಾನ ಸೇವೆಯ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ದೇವಸ್ಥಾನದಲ್ಲಿ ನಿಷ್ಟೆಯಿಂದ ಕೆಲಸ ಮಾಡಿದರೆ ನಮಗೆ ಫಲ ದೊರಕುವುದು ನಿಶ್ಚಿತ ಎಂದ ಅವರು ಸಾರ್ವಭೌಮವಾದ ರಾಷ್ಟ್ರವಿದ್ದರೆ ಮಾತ್ರ ಧಾರ್ಮಿಕ ವಿಚಾರಗಳು ಉಳಿಯಬಹುದು. ಈ ದೆಸೆಯಲ್ಲಿ ದೇಶದ ಉಳಿವಿಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.

ಮಾವಂತೂರು ಶ್ರೀ ಬಲವಾಂಡಿ ದೇವಸ್ಥಾನದ ಗಡಿಕಾರರು ದುರ್ಗಾದಾಸ್ ಶೆಟ್ಟಿ, ಇಂಜಿನಿಯರ್ ಶಿವಪ್ರಸಾದ್ ಕೊಟ್ಟಾರಿ, ಉದ್ಯಮಿಗಳಾದ ಜಯಪದ್ಮ ಎ. ಬೆಂಗಳೂರು, ಶ್ರೀನಿವಾಸ ಪೂಜಾರಿ ಮೆಲ್ಕಾರ್, ದಾಮೋದರ ಶೆಟ್ಟಿ ಪುಣೆ, ಬೊಂಡಾಲ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಜಯರಾಮ ಹೊಳ್ಳ ನಾಗ್ತಿಮಾರು ವೇದಿಕೆಯಲ್ಲಿದ್ದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ ಅವರು ಸ್ವಾಗತಿಸಿ, ಪ್ರಸ್ತಾವನೆಗೈದರು.
ನಾಗೇಶ್ ಶೆಟ್ಟಿ ಬೊಂಡಾಲ ವಂದಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter