ಶ್ರೀ ಮದ್ಭಾಗವತ ಕಥಾ ಪಾರಾಯಣ ಸಪ್ತಾಹ ನವರಾತ್ರಿ ಉತ್ಸವ ಸಂಪನ್ನ ;ರಾಷ್ಟ್ರವನ್ನು ಬೆಳೆಸುವ ಕಾರ್ಯವಾಗಲಿ: ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ
ಬಂಟ್ವಾಳ: ತಾಲೂಕಿನ ಪುದು ಗ್ರಾಮದ ಶ್ರೀ ರಾಧಾ ಸುರಭಿ ಗೋಮಂದಿರದಲ್ಲಿ ಕಳೆದ 9 ದಿನಗಳ ಕಾಲ ನಡೆದ ಅಷ್ಟೋತ್ತರ ಶತ (108) ಶ್ರೀ ಮದ್ಭಾಗವತ ಕಥಾ ಪಾರಾಯಣ ಸಪ್ತಾಹ ಮಹಾಯಾಗ, ನವರಾತ್ರಿ ಉತ್ಸವ ಹಾಗೂ ನಾರಾಯಣ ಕವಚ ಮಹಾಯಾಗವು ಬುಧವಾರ ಸಂಪನ್ನಗೊಂಡಿತು.
ಗೋ ಮಂದಿರದ ಶ್ರೀ ಭಕ್ತಿ ಭೂಷಣದಾಸ್ ಪ್ರಭುಜಿ ಯವರ ಮಾರ್ಗದರ್ಶನ ದಲ್ಲಿ ೧೬ ಕುಂಡಗಳಲ್ಲಿ ಒಟ್ಟು 1108 ನಾರಾಯಣ ಕವಚ ಮಹಾಯಾಗವು ಧರ್ಮ, ರಾಷ್ಟ್ರ ಹಾಗೂ ಗೋ ರಕ್ಷಾರ್ಥ ಉದ್ದೇಶದೊಂದಿಗೆ 45 ದಿನಗಳ ಗೋ ರಥಯಾತ್ರೆ ಸೇರಿದಂತೆ ಬೃಜೇಶ್ ಗೋಸ್ವಾಮಿ ಯವರ ನೇತೃತ್ವದಲ್ಲಿ ಅಖಿಲ ಭಾರತ ಗೋ ಸೇವಾ ಗತಿವಿದಿ ಅಧ್ಯಕ್ಷ ಅಜಿತ್ ಮಹಾಪಾತ್ರ ಅವರ ಉಪಸ್ಥಿತಿಯಲ್ಲಿ ಮಧ್ಯಾಹ್ನ ನಾರಾಯಣ ಕವಚಯಾಗದ ಪೂರ್ಣಾಹುತಿ ಸಂಪನ್ನಗೊಂಡಿತು.
ರಾಷ್ಟ್ರವನ್ನು ಬೆಳಸುವ ಕಾರ್ಯವಾಗಲಿ: ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ:
ಮಹಾಪೂಜೆಯ ಬಳಿಕ ಮಹಾಯಾಗದ ಸಮಾರೋಪ ಸಮಾರಂಭದಲ್ಲಿ ಉಡುಪಿ ಅದಮಾರು ಮಠದ ಶ್ರೀ ಈಶ ಪ್ರಿಯ ತೀರ್ಥ ಪಾಂದಗಳ ರವರು ಮಹಾಯಾಗದಲ್ಲಿ ಉತ್ಪತ್ತಿಯಾದ ದಿವ್ಯ ಔಷದಿಯನ್ನು ಸಾಂಕೇತಿಕವಾಗಿ ವಿತರಿಸಿ ಆರ್ಶೀವಚನ ನೀಡಿದರು.
ಯಾವುದೇ ಕೆಲಸದ ಹಿಂದೆ ಸಮಾಜಕ್ಕೆ ಒಳಿತಾಗುವ ಚಿಂತನೆ ಇರಬೇಕು, ಪ್ರತಿಯೊಂದು ಕೆಲಸ ದೇವರ ಕೆಲಸವಾಗಬೇಕು, ಭಾಗವತದ ಪ್ರತಿಯೊಂದು ಅರ್ಥದಲ್ಲಿಯೂ ನಾವು ದೇವರನ್ನು ಕಾಣುತ್ತೆವೆ, ಗೋ ನವರಾತ್ರಿ ಉತ್ಸವದ ಮೂಲಕ ಭೂಮಿ ಪವಿತ್ರವಾಗಿದೆ. ದಿನದ ಕನಿಷ್ಠ ಸಮಯವನ್ನಾದರೂ ಭಾಗವತ ಶ್ರವಣ ಮಾಡಲು ಪ್ರಯತ್ನಿಸುವ ಮೂಲಕ ರಾಷ್ಟ್ರವನ್ನು ಬೆಳೆಸುವ ಕಾರ್ಯವಾಗಬೇಕು ಎಂದು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಎಂದು ನುಡಿದರು.
ಈ ಸಂದರ್ಭದಲ್ಲಿ ಮಹಾಯಾಗದಲ್ಲಿ ಧರ್ಮಧಿಕಾರಿ ಸೇವೆಯನ್ನು ಮಾಡಿದ ಸೇವಾರ್ಥಿಗಳನ್ನು ಸ್ವಾಮೀಜಿಯವರು ಮಂತ್ರಾಕ್ಷತೆ ನೀಡಿ ಹರಸಿದರು.
ವೇದಿಕೆಯಲ್ಲಿ ವೃಂದಾವನದ ಬ್ರಿಜೇಶ್ ಗೋಸ್ವಾಮಿ ರಾಷ್ಟ್ರೀಯ ಗೋ ಸೇವಾ ಗತಿವಿಧಿಯ ಅಜಿತ್ ಮಹಾಪಾತ್ರ, ರಾಧಾ ಸುರಭಿ ಗೋ ಮಂದಿರದ ಭಕ್ತಿ ಭೂಷಣ್ ಪ್ರಭುಜಿ, ಗೋ ಸೇವಾ ಗತಿವಿಧಿಯ ಪ್ರವೀಣ್ ಸರಳಾಯ, ಶೋಭಾ ಮಯ್ಯಜಿ, ರೂಪಾ ಮಾತಾಜಿ, ಸಮಿತಿಯ ಪದಾಧಿಕಾರಿಗಳಾದ ವಿಜಯ ಪ್ರಕಾಶ ಮಲ್ಪೆ, ಎಂ ಆರ್ ನಾಯರ್, ರಾಮಚಂದ್ರ ಮಾರಿಪಲ್ಲ, ಪದ್ಮನಾಭ ಶೆಟ್ಟಿ, ಅನಿಲ್ ಪಂಡಿತ್, ವಸಂತಿ ಶೆಟ್ಟಿ ಉಪಸ್ಥಿತರಿದ್ದರು.
ಸಮಿತಿ ಕಾರ್ಯದರ್ಶಿ ದಾಮೋದರ ನೆತ್ತರಕೆರೆ ಸ್ವಾಗತಿಸಿದರು, ಕಾರ್ಯಾಧ್ಯಕ್ಷ ತೇವು ತಾರಾನಾಥ ಕೊಟ್ಟಾರಿ ಪ್ರಾಸ್ತವಿಸಿ, ವಂದಿಸಿದರು.