ಬೆಂಜನಪದವು ಕೊರಗ ತನಿಯ ಕ್ಷೇತ್ರಕ್ಕೆ ಭೇಟಿ ಕೊಟ್ಟ ಖ್ಯಾತ ನಟಿ
ಕೈಕಂಬ: ಬೆಂಜನ ಪದವು ಕೊರಗ ತನಿಯ ಕ್ಷೇತ್ರಕ್ಕೆ ಕನ್ನಡದ ಖ್ಯಾತ ಚಲನಚಿತ್ರ ನಟಿ ರಚಿತಾ ರಾಮ್ ನ.3 ರಂದು ಶುಕ್ರವಾರ ಕ್ಷೇತ್ರಕ್ಕೆ ಬಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

ಕುಟುಂಬ ಸಮೇತರಾಗಿ ಬಂದ ಅವರನ್ನು ಕ್ಷೇತ್ರದ ವತಿಯಿಂದ ಸಾಲು , ಫಲವಸ್ತು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕ್ಷೇತ್ರದ ಧರ್ಮದರ್ಶಿ ವಿಜಯ್ , ಸೌಮ್ಯ ,ರಕ್ಷಿತ್ ,ವೈಭವಿ , ನಾರಯಣ ಪೂಜಾರಿ, ಭರತ್ ಮತ್ತಿತರರು ಇದ್ದರು.
