ಫರಂಗಿಪೇಟೆ ವ್ಯ.ಸೇ.ಸ. ಸಂಘಕ್ಕೆ 17.47ಲಕ್ಷ ರೂ. ನಿವ್ವಳ ಲಾಭ: ಸುಬ್ರಮಣ್ಯ ರಾವ್
ಬಂಟ್ವಾಳ: ಫರಂಗಿಪೇಟೆ ವ್ಯವಸಾಯ ಸೇವಾ ಸಹಕಾರಿ ಸಂಘವು ೨೦೨೨-೨೩ ಸಾಲಿನಲ್ಲಿ 79.72 ಕೋಟಿ ವ್ಯವಹಾರ ಮಾಡಿದ್ದು, 17.47ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಪಿ. ಸುಬ್ರಮಣ್ಯ ರಾವ್ ಹೊಯ್ಗೆ ಗದ್ದೆ ತಿಳಿಸಿದ್ದಾರೆ.
ಫರಂಗಿಪೇಟೆ ಸೇವಾಂಜಲಿ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸದಸ್ಯರಿಗೆ ಶೇ. 10 ಡಿವಿಡೆಂಡ್ ನ್ನು ಘೋಷಿಸಿದರು.
ಕಳೆದ ವರ್ಷಾಂತ್ಯಕ್ಕೆ 17.06 ಕೋ.ರೂ. ಇದ್ದ ಠೇವಣಿ ಈ ವರ್ಷಾಂತ್ಯಕ್ಕೆ 19.04 ಕೋಟಿ ರೂ.ವಿಗೆ ಏರಿಕೆಯಾಗಿದ್ದು,ದುಡಿಯುವ ಬಂಡವಾಳ 18.52 ಕೋಟಿ ರೂ.ವಿನಿಂದ 20.53 ಕೋಟಿ ರೂ.ಗೆ ತಲುಪಿದೆ.ಸಂಸ್ಥೆಯು ಸಾಲ ವಸೂಲಾತಿಯಲ್ಲಿ 92.70% ಪ್ರಗತಿ ದಾಖಲಿಸಿದೆ ಎಂದು ಅವರು ತಿಳಿಸಿದರು.
ಮುಖ್ಯ ಕಾರ್ಯನಿರ್ವಹಣಾದಿಕಾರಿ ಕಮಲಾ ಬಿ ಯವರು ವರದಿ,ಲೆಕ್ಕಪತ್ರ ಮಂಡಿಸಿದರು.ಉಪಾಧ್ಯಕ್ಷ ಪದ್ಮನಾಭ ಶೆಟ್ಟಿ ಪುಂಚಮೆ ,ನಿರ್ದೇಶಕರುಗಳಾದ ಪ್ರತಾಪ್ ಕುಮಾರ್ ಆಳ್ವ,ಸುಜೀರ್,ಜೀವನ್ ಪ್ರಕಾಶ್ ಡಿಸೋಜಾ ಬಡ್ಡೂರು,ಗಂಗಾಧರ ಪೂಜಾರಿ ಅಬ್ಬೆಟ್ಟು,ಸಂತೋಷ್ ಕುಮಾರ್ ನೆತ್ತರಕೆರೆ,ವೆಂಕಪ್ಪ ಕುಂಭ್ಡೇಲು,ಶೈಲಜಾ ಪಿ ಶೆಟ್ಟಿ ಕೊಟ್ಟಿಂಜ,ವಸಂತಿ ಕೆ. ಕಿದೆ ಬೆಟ್ಟು,ಹರೀಶ್ ಕುಮಾರ್ ಕೊಡ್ಮಾಣ್ , ಪುರುಷೋತ್ತಮ ಅಬ್ಬೆಟ್ಟು,ರಮೇಶ್ ಬಂಗೇರ ಎಂ. ಪೆಡಗೂರಿ,ಜಯಾನಂದ ನಾಯ್ಕ ಕುಂಭ್ಡೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.