ಶ್ರೀ ಭಗವತೀ ದೇವಸ್ಥಾನ ವಿಟ್ಲ ೮ ನೇ ವರ್ಷದ ‘ವಿಟ್ಲ ಯಕ್ಷೋತ್ಸವ’ ೨೦೨೩
ವಿಟ್ಲ: ಯಕ್ಷ ಭಾರತ ಸೇವಾ ಪ್ರತಿಷ್ಠಾನ ಶ್ರೀ ಭಗವತೀ ದೇವಸ್ಥಾನ ವಿಟ್ಲ ಇದರ ೮ ನೇ ವರ್ಷದ ವಿಟ್ಲ ಯಕ್ಷೋತ್ಸವವು ಶ್ರೀ ಭಗವತೀ ದೇವಸ್ಥಾನದ ಸಭಾ ಭವನದಲ್ಲಿ ನಡೆಯಿತು.

ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಮಕ್ಕಳ ಯಕ್ಷಗಾನ
‘ಕದಂಬ ಕೌಶಿಕೆ’ ಮತ್ತು ತೆಂಕು ತಿಟ್ಟಿನ ಕಲಾವಿದರಿಂದ ‘ಸುದರ್ಶನೋಪಖ್ಯಾನ’ ಎಂಬ ಕನ್ನಡ ಪೌರಾಣಿಕ ಪ್ರಸಂಗ ಯಕ್ಷಗಾನ ಬಯಲಾಟ ಸೆಪ್ಟೆಂಬರ್ ೨ ರಂದು ಸಂಜೆ ೩ ಗಂಟೆಯಿಂದ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.ಇದೇ ಸಂದರ್ಭದಲ್ಲಿ ಶ್ರೀ ಭಗವತೀ ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.