ಕಲ್ಲಡ್ಕ: ಕಂಪ್ಯೂಟರ್ ಶಿಕ್ಷಕರ ಕಾರ್ಯಾಗಾರ
ಬಂಟ್ವಾಳ: ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಆಶ್ರಯದಲ್ಲಿ ಪ್ರೌಢಶಾಲಾ ‘ಕಣಾದ’ ಕಂಪ್ಯೂಟರ್ ಲ್ಯಾಬ್ನಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಬರುವ ಕನ್ನಡ ಮಾಧ್ಯಮ ಶಾಲೆಯ ಕಂಪ್ಯೂಟರ್ ಶಿಕ್ಷಕರಿಗೆ ೨ ದಿನಗಳ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರವನ್ನು ಕರ್ನಾಟಕ ಸರಕಾರದ ಮಾಹಿತಿ ಮತ್ತು ತಂತ್ರಜ್ಞಾನ ಸಲಹೆಗಾರ, ಮೊದಲ ಬಾರಿಗೆ ಕನ್ನಡದಲ್ಲಿ ವೆಬ್ಸೈಟ್ ರಚಿಸಿದ ಡಾ ಯು.ಬಿ. ಪವನಜ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.

ನಂತರ ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡದ ಬಳಕೆ ಮತ್ತು ತಂತ್ರಾಂಶವನ್ನು ಕನ್ನಡದಲ್ಲಿ ಕೋಡಿಂಗ್ನ ಮೂಲಕ ಬಳಸುವುದು ಹೇಗೆ ಎಂಬ ಕುರಿತು ತಿಳಿಸಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ ೨೦ಕ್ಕಿಂತ ಹೆಚ್ಚು ತಾಂತ್ರಿಕ ಪ್ರಕಟಣೆಗಳಿರುವ ಹಾಗೂ ಅನುಮತಿ ಪಡೆದುಕೊಂಡ ೩೦ ಪೇಟೆಂಟ್ಗಳು ಇರುವ ಡಾ.ಆನಂದ ಸಾವಂತ್ ಇವರು ಶಿಕ್ಷಕರಿಗೆ ತಂತ್ರಾಂಶದಲ್ಲಿ ಕೋಡಿಂಗ್ ಬಳಸುವುದರ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಗಾರದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಶಿಕ್ಷಣ ಪರಿವೀಕ್ಷಕರಾದ ರಘುರಾಜ್ ಉಬರಡ್ಕ, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಗೋಪಾಲ ಎಂ. ಉಪಸ್ಥಿತರಿದ್ದರು. ಒಟ್ಟು ೧೯ ಸಂಸ್ಥೆಗಳಿಂದ ೨೨ ಶಿಕ್ಷಕರು ಭಾಗವಹಿಸಿದ್ದರು.ಶಿಕ್ಷಕರಾದ ಕುಶಾಲಪ್ಪ ಅಮ್ಟೂರು ಸ್ವಾಗತಿಸಿ, ವಂದಿಸಿದರು