ಫರಂಗಿಪೇಟೆ: ತುಟ್ಟಿಬತ್ತೆ ನೀಡುವಂತೆ ಆಗ್ರಹ ಬೀಡಿ ಕಾರ್ಮಿಕರಿಂದ ಪ್ರತಿಭಟನೆ
ಬಂಟ್ವಾಳ:ಇಲ್ಲಿನ ಪಾಣೆಮಂಗಳೂರು ಫಿರ್ಕಾ ಬೀಡಿ ಎಂಡ್ ಜನರಲ್ ವರ್ಕರ್ಸ್ ಯೂನಿಯನ್ (ಎಐಟಿಯುಸಿ) ನೇತೃತ್ವದಲ್ಲಿ ಫರಂಗಿಪೇಟೆಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಜಿಲ್ಲಾ ಬೀಡಿ ವರ್ಕರ್ಸ್ ಫೆಡರೇಶನ್ (ಎಐಟಿಯುಸಿ) ನೇತೃತ್ವದಲ್ಲಿ ಇದು ಜಿಲ್ಲಾ ವ್ಯಾಪಿ ನಡೆಯುತ್ತಿರುವ ೬ನೇ ಹಕ್ಕೊತ್ತಾಯ ಚಳುವಳಿ ಎಂದು ಎಐಟಿಯುಸಿ ರಾಜ್ಯ ಮುಖಂಡ ವಿ.ಕುಕ್ಯಾನ್ ಹೇಳಿದರು. ಹೈಕೋರ್ಟು ತೀರ್ಪಿನಂತೆ ರೂ.೧೨.೭೫ ತುಟ್ಟಿಬತ್ತೆ ಮತ್ತು ರೂ.೨೧೦ ಕನಿಷ್ಠ ಕೂಲಿ ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಮಾತನಾಡಿ, ಮುಂಬರುವ ಆ.೧ ರಂದು ಮಂಗಳೂರು ಮಿನಿವಿಧಾನ ಸೌಧ ಎದುರು ಬೃಹತ್ ಪ್ರತಿಭಟನೆ ನಡೆಯಲಿದೆ ಎಂದರು. ಬಂಟ್ವಾಳ ಬೀಡಿ ಎಂಡ್ ಜನರಲ್ ಲೇಬರ್ ಯೂನಿಯನ್ ಅಧ್ಯಕ್ಷ ಬಿ.ಬಾಬು ಭಂಡಾರಿ ಮಾತನಾಡಿದರು. ಪ್ರಮುಖರಾದ ಶಮಿತಾ, ಮಮತಾ, ಮೋಹಿನಿ, ಹರ್ಷಿತ್, ಎಂ.ಬಿ.ಭಾಸ್ಕರ ಮತ್ತಿತರರು ಇದ್ದರು.