ಬಂಟ್ವಾಳ: ವಕೀಲರಿಂದ ವಿಶ್ವ ಭೂ ದಿನಾಚರಣೆ
ಬಂಟ್ವಾಳ: ವಕೀಲರ ಸಂಘ ಬಂಟ್ವಾಳ ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಶುಕ್ರವಾರ ವಕೀಲರ ಸಂಘದ ಅವರಣದಲ್ಲಿ ವಿಶ್ವ ಭೂ ದಿನವನ್ನು ಆಚರಿಸಲಾಯಿತು.

ಬಂಟ್ವಾಳ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಕಾರ್ಯದರ್ಶಿ ಚಂದ್ರಶೇಖರ ತಳವಾರ ಅವರು ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ನ್ಯಾಯವಾದಿ ಶಿವಪ್ರಕಾಶ್ ಜೈನ್ ಅವರು ಪ್ರಕೃತಿಯ ರಕ್ಷಣೆಗೆ ನಾವು ಮಾಡಬೇಕಾದ ಮುಂಜಾಗ್ರತೆ ಮತ್ತು ಪಕೃತಿಯ ರಕ್ಷಣೆಗೆ ನಮ್ಮ ಕರ್ತವ್ಯವೇನು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಸರಕಾರಿ ಅಭಿಯೋಜಕರಾದ ಹರಿಣಿ ಅವರು ಉಪಸ್ಥಿತರಿದ್ದರು ವಕೀಲರ ಸಂಘದ ಅಧ್ಯಕ್ಷರಾದ ರಿಚರ್ಡ್ ಕೋಸ್ತ ಎಂ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಕೀಲರ ಸಂಘದ ಹಿರಿಯ,ಕಿರಿಯ ವಕೀಲರು ಉಪಸ್ಥಿತರಿದ್ದರು.