ಶ್ರೀ ಕ್ಷೇತ್ರ ಪೆರಾರಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
ಕೈಕಂಬ: ಶ್ರೀ ಕ್ಷೇತ್ರ ಪೆರಾರದಲ್ಲಿ ನೂತನವಾಗಿ ಪುನರ್ ನಿರ್ಮಿಸಿರುವ ಛತ್ರದರಸು ಚಾವಡಿ ಬಂಟಕಂಬ ರಾಜಾಂಗಣ ಹಾಗೂ ಪಿಲಿಚಾಂಡಿ ದೈವಸ್ಥಾನದಲ್ಲಿ ಶ್ರೀ ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕ ಮಾರ್ಚ್ 4 ರಿಂದ ಮಾರ್ಚ್ 10 ರವರೆಗೆ ನಡೆಯಲಿದೆ.
ಆ ಪ್ರಯುಕ್ತ ಇಂದು ಕ್ಷೇತ್ರಕ್ಕೆ ಭಕ್ತರಿಂದ ಪಡುಪೆರಾರ ಕಟ್ಟಲ್ತಾಯ ಪಂಜುರ್ಲಿ ದೈವಸ್ಥಾನ, ಪಡೀಲ್,ಭಟ್ರಕೆರೆ,ಬಜಪೆ ಸುಂಕದಕಟ್ಟೆ, ಮೂಡುಪೆರಾರ ತನ್ಯಗುತ್ತು, ಗಂಜಿಮಠ,ವಾಮಂಜೂರು ಅಮೃತೇಶ್ವರ ದೇವಸ್ಥಾನ ,ಮೂಡುಶೆಡ್ಯೆ,ಗುರುಪುರ ಹಾಗೂ ಕೈಕಂಬ ಮುಂತಾದ ಕಡೆಗಳಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು.