ಮುಂಬಯಿ: ಕಲಬುರಗಿ  ವಿಮಾನ  ನಿಲ್ದಾಣ  ಪ್ರಾಧಿಕಾರದ  ನೂತನ  ಸದಸ್ಯರಾಗಿ ನೇಮಕಗೊಂಡ ನರಸಿಂಹ  ಮೆಂಡನ್ ಅವರನ್ನು ಬಿ ಜೆ ಪಿಯ  ರಾಜ್ಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಶಾಲು ಹಾಗೂ ಪುಷ್ಪಗುಚ್ಚ ನೀಡಿ ಕಲಬುರಗಿಯಲ್ಲಿ  ಇಂದು ಅಭಿನಂದಿಸಿದರು.Screenshot_20220516-160206_WhatsApp
ಪ್ರಾಧಿಕಾರಕ್ಕೆ ಮೆಂಡನ್ ಅವರ ನೇಮಕ  ತುಂಬಾ ಖುಷಿ ತಂದಿದೆ ಮತ್ತು ನೇಮಕ  ಮಾಡಿದ   ಲೋಕಸಭಾ  ಸದಸ್ಯರಾದ  ಡಾ.ಉಮೇಶ್ ಜಾಧವ್  ಅವರಿಗೂ ಅಭಿನಂದಿಸುವೆ. ಉತ್ತಮ  ಕೆಲಸ ಮಾಡಿ ಈ ಭಾಗಕ್ಕೆ  ನೆರವಾಗಲು  ರೂಪುರೇಷೆ  ಸಿದ್ದಮಾಡಿ ಹಾಗೂ ಸರಕಾರಕ್ಕೆ ಹೆಸರು  ತನ್ನಿ ಎಂದು  ಕಟೀಲ್  ಶುಭ  ಹಾರೈಸಿದರು.
ಈ  ಸಂದರ್ಭದಲ್ಲಿ ಲೋಕಸಭಾ  ಸದಸ್ಯರಾದ  ಡಾ  ಉಮೇಶ್ ಜಾಧವ್, ದಕ್ಷಿಣ  ಕನ್ನಡ  ಸಂಘದ  ಅಧ್ಯಕ್ಷರಾದ ಡಾ. ಸದಾನಂದ  ಪೆರ್ಲ, ಮುಖಂಡರಾದ ಡಾ  ಅಂಬಾರಾಯ ಅಷ್ಟಗಿ ಜೊತೆಗಿದ್ದರು.

By suddi9

Leave a Reply

Your email address will not be published. Required fields are marked *