ಕೈಕಂಬ: ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾ ಮಂಗಳೂರು ನಗರ ಉತ್ತರ ಮಂಡಲ ಮತ್ತು ಭಾರತೀಯ ಜನತಾ ಪಾರ್ಟಿ ಗಂಜಿಮಠ ಹಾಗೂ ಕರ್ನಾಟಕ ಒನ್ ಜಂಟಿ ಸಹಯೋಗದಲ್ಲಿ  ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ಆಯುಷ್ಮಾನ್ ಹಾಗೂ ಇ-ಶ್ರಮ್ ಕಾರ್ಡ್ ನೋಂದಣಿಯ ಬ್ರಹತ್ ಶಿಬಿರ ಮಳಲಿಯ ಕುಲಾಲಭವನದಲ್ಲಿ ಭಾನುವಾರ ನಡೆಯಿತು.WhatsApp Image 2022-03-29 at 4.10.43 PM

ಮಂಡಲ ಹಿಂದುಳಿದ ವರ್ಗಗಳ  ಮೋರ್ಚಾದ ಅಧ್ಯಕ್ಷ ಗಂಗಾಧರ್ ಸನಿಲ್ ಅವರು ದೀಪ ಬೆಳಗಿಸಿ  ಭಾರತ ಮಾತೆಯ ಭಾವಚಿತ್ರಕ್ಕೆ  ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.  ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಬಿಜೆಪಿ ಮುಖಂಡ ಚಂದ್ರಹಾಸ್ ಶೆಟ್ಟಿ ನಾರಳ, ಹಿಂದುಳಿದ ವರ್ಗಗಳ ಮೋರ್ಚಾ ದ ಪ್ರಧಾನ ಕಾರ್ಯದರ್ಶಿ ಹರೀಶ್ ಎಡಪದವು, ಉಪಾಧ್ಯಕ್ಷ ಶಿವಾಜಿ ನಾರಳ, ಮಳಲಿ ಬಿಜೆಪಿ ಬೂತ್ ಅಧ್ಯಕ್ಷ ಸೀತಾರಾಮ್ ಪೂಜಾರಿ ಸಂಕೇಶ, ಕಾರ್ಯದರ್ಶಿ ವಿಶಾಲ್ ಕುಲಾಲ್ ಮಳಲಿ ಸೇರಿದಂತೆ ಬಿಜೆಪಿ ಮುಖಂಡರು,ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಶಿಬಿರದಲ್ಲಿ ಭಾಗವಹಿಸಿದ್ದರು.  ಶಾಸಕ ಡಾ. ಭರತ್ ಶೆಟ್ಟಿ ಶಿಬಿರಕ್ಕೆ ಭೇಟಿ ನೀಡಿ ಶುಭ ಹಾರೈಸಿದರು ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೋಗಿ, ಬಿಜೆಪಿ ಗುರುಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಹನ್ ಅತಿಕಾರಿ,ಮಂಡಲ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷ ಶಿವರಾಜ್ ನಾರಳ ಶಾಸಕರ ಜತೆಯಲ್ಲಿದ್ದರು.WhatsApp Image 2022-03-29 at 4.10.42 PM

ಶಿಬಿರದಲ್ಲಿ 95 ಆಧಾರ್ ಕಾರ್ಡ್ ತಿದ್ದುಪಡಿ,48 ಇ-ಶ್ರಮ್ ಕಾರ್ಡ್ ಮತ್ತು 70 ಅಯುಷ್ಮಾನ್ ಕಾರ್ಡ್ ಗಳ ನೋಂದಾವಣೆ ಮಾಡಲಾಯಿತು.

By suddi9

Leave a Reply

Your email address will not be published. Required fields are marked *