ಮುಂಬಯಿ : ಉತ್ತರ ಮುಂಬಯಿ ಸಂಸದ ಗೋಪಾಲ ಸಿ.ಶೆಟ್ಟಿ ಅವರು ರೈಲ್ವೆ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಮತ್ತು ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಚರ್ಚ್ ಗೇಟ್ ನಲ್ಲಿರುವ ಕೇಂದ್ರ ಕಚೇರಿಯಲ್ಲಿ ಮುಂಬಯಿ ರೈಲ್ವೆ ಅಭಿವೃದ್ಧಿ ನಿಗಮದ ನಿರ್ದೇಶಕ ಮತ್ತು ಅಧ್ಯಕ್ಷ ರವಿ ಅಗರ್ವಾಲ್ ಅವರೊಂದಿಗೆ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಯೋಜನಾ ನಿರ್ದೇಶಕ ವಿಲಾಸ್ ವಾಡೇಕರ್, ಮುಂಬಯಿ ಬಿಜೆಪಿ ಕಾರ್ಯದರ್ಶಿ ಯೂನಸ್ ಖಾನ್, ಕೈಲಾಶ್ ವರ್ಮಾ, ಬಿಜೆಪಿ ರೈಲು ಬಳಕೆದಾರರ ಕೋಶದ ಸಂಚಾಲಕರು ಮತ್ತಿತರರು ಉಪಸ್ಥಿತರಿದ್ದರು.

