ಕೈಕಂಬ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಭಾನುವಾರ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಆಚರಣೆಗಳೊಂದಿಗೆ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ `ಕಾಲಾವಧಿ ಗುರುಪುರ ಬಂಡಿ ಜಾತ್ರೆ’ ನೆರವೇರಿತು.gur-feb-13-bhandhi-1

ಪ್ರಾತಃಕಾಲದಲ್ಲಿ ದೈವಸ್ಥಾನಕ್ಕೆ ಭಂಡಾರ ಆಗಮನವಾದ ಬಳಿಕ ಶ್ರೀ ವೈದ್ಯನಾಥ ಮತ್ತು ಶ್ರೀ ಧೂಮಾವತಿ ದೈವ ಪಾತ್ರಿಗಳ ದರ್ಶನದೊಂದಿಗೆ `ಗರಡೆ’ ಧ್ವಜಾರೋಹಣ ನಡೆಯಿತು. ನಂತರ ಭಕ್ತಾದಿಗಳ ಕಂಚಿಲು ಸೇವೆ ಮತ್ತು ಉರುಳು ಸೇವೆ ನಡೆಯಿತು. ಮಧ್ಯಾಹ್ನ ಒಂದು ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಶ್ರೀ ವೈದ್ಯನಾಥ ದೈವದ ನೇಮ ಹಾಗೂ ಮುಂಜಾನೆ ಬಂಡಿ ರಥೋತ್ಸವ, ಅಭಯ ಪ್ರದಾನ ಮತ್ತು ಪ್ರಸಾದ ವಿತರಣೆ ನಡೆಯಿತು.13-1

gur-feb-13-kanchilu-2

ಧಾರ್ಮಿಕ ಆಚರಣೆ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಗಡಿಕಾರ ಪ್ರಮೋದ್ ಕುಮಾರ್ ರೈ ಸಹಿತ ೧೬ ಗುತ್ತುಗಳ ಯಜಮಾನರು, ಊರ-ಪರವೂರ ಸಾವಿರಾರು ಭಕ್ತರು ಇದ್ದರು.

13-2

By suddi9

Leave a Reply

Your email address will not be published. Required fields are marked *